ಬೀದರ್ ಜಿಲ್ಲೆಯ ಉಪನಿರ್ದೇಶಕ ಚಂದ್ರಶೇಖರ್ ರವರು ಎಸ್ಎಸ್ಎಲ್ ಸಿ ಪರಿಕ್ಷೆಯನ್ನು ಮಕ್ಕಳು ಯಾವುದೇ ಆತಂಕ ವಿಲ್ಲದೆ ಬರೆಯುವುದಕ್ಕೆ ಅನುವು ಮಾಡಿದ ಜಿಲ್ಲಾಡಳಿತ ಕ್ಕೆ ಧನ್ಯವಾದ ಹೇಳಿದರು. 94℅ರಷ್ಟರಂತೆ ಜಿಲ್ಲೆಯಲ್ಲಿ ಒಟ್ಟು 26882 ಮಕ್ಕಳು ಪರೀಕ್ಷೆ ಹಾಜರಾಗಿದ್ದು ಜಿಲ್ಲೆಯಲ್ಲಿ ಒಟ್ಟು 99 ಪರೀಕ್ಷಾ ಕೇಂದ್ರಗಳು ಇದ್ದು ಕರೋನಾ ವೈರಸ್ ನ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಮಾಜಿಕ ಅಂತರ ಕಾಪಾಡಲು ಹೆಚ್ಚುವರಿಯಾಗಿ ಹತ್ತು ಪರೀಕ್ಷಾ ಕೇಂದ್ರಗಳು ಮಾಡಲಾಗಿದ್ದು. ಸರ್ಕಾರಿ ಸಾರಿಗೆ ವ್ಯವಸ್ಥೆ ಇದ್ದರು ಬೇರೆ ಸ್ಥಳಗಳಿಂದ ವಿದ್ಯಾರ್ಥಿಗಳು ಬರಲು ಖಾಸಗಿ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಶಿಕ್ಷಣ ಉಪನಿರ್ದೇಶಕ ಅಧಿಕಾರಿಗಳು ಹೇಳಿದರು. ಜಿಲ್ಲಾಡಳಿತ,ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿ, ಆರೋಗ್ಯ ಅಧಿಕಾರಿ ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಹಾಗೂ ಎಲ್ಲಾ ಕ್ಷೇತ್ರದ ಅಧಿಕಾರಿ ಗಳು ಸಹಕಾರಿಸಿದಕ್ಕೆ ಧನ್ಯವಾದಗಳನ್ನು ಹೇಳಿದರು.
ಜಿಲ್ಲಾಡಳಿತ ಕ್ಕೆ ಧನ್ಯವಾದ ಹೇಳಿದ ಉಪನಿರ್ದೇಶಕರು
Please follow and like us: