ನವವಿವಾಹಿತರಿಬ್ಬರು ತಮ್ಮ ಆರತಕ್ಷತೆಗೆ ಮುನ್ನವೇ ಶವವಾಗಿ ಪತ್ತೆ

ರಾಯ್‍ಪುರ.ಫೆ.22- ನವವಿವಾಹಿತರಿಬ್ಬರು ತಮ್ಮ ಆರತಕ್ಷತೆಗೆ ಮುನ್ನವೇ ಶವವಾಗಿ ಪತ್ತೆಯಾಗಿರುವ ಘಟನೆ ಛತ್ತಿಸ್‍ಗಢದಲ್ಲಿ ನಡೆದಿದೆ. ಮೃತಪಟ್ಟಿರುವ ಅಸ್ಲಾಂ(24) ಮತ್ತು ಕಹಕಸ ಬಾನು(22) ಭಾನುವಾರ ವಿವಾಹವಾಗಿದ್ದು, ನಿನ್ನೆ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆಯಬೇಕಿತ್ತು.

ಇಬ್ಬರು ಆರತಕ್ಷತೆಗಾಗಿ ಕೊನೆಯೊಳಗೆ ತಯಾರಾಗುತ್ತಿದ್ದರು, ಈ ವೇಳೆ ವಧು ಜೋರಾಗಿ ಕಿರುಚಿಕೊಂಡಿರುವ ಸದ್ದು ಕೇಳಿ ಮನೆಯವರೆಲ್ಲ ಕೋಣೆಯತ್ತ ಧಾವಿಸಿದ್ದಾರೆ. ಕೋಣೆ ಬಾಗಿಲು ಒಳಭಾಗದಿಂದ ಲಾಕ್ ಆಗಿತ್ತು. ಸಂಬಂಧಿಕರು ಕಿಟಕಿಯಲ್ಲಿ ಇಣುಕಿ ನೋಡಿದಾಗ ಇಬ್ಬರು ರಕ್ತ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ಮುರಿದು ಕೋಣೆಯೋಳಗೆ ತೆರಳಿದ ಪೊಲೀಸರು, ಮೃತದೇಹಗಳನ್ನು ಶವ ಪರೀಕ್ಷೆಗೆ ಕಳುಹಿಸಿ, ಅಲ್ಲೇ ಇದ್ದ ಚೂರಿಯನ್ನು ವಶಪಡಿಸಿಕೊಂಡಿದ್ದಾರೆ.

ಗಂಡ – ಹೆಂಡತಿ ನಡುವೆ ವಾಗ್ವಾದ ನಡೆದು, ಗಂಡ ಹೆಂಡತಿಗೆ ಚೂರಿಯಲ್ಲಿ ಚುಚ್ಚಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಕಳಿಕೆ ಹೆಚ್ಚಿದ್ದರೆ, ಅದು ಅನೇಕ ರೋಗಗಳ ಸಂಕೇತ !

Wed Feb 22 , 2023
ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ನಿದ್ರೆಯ ಕೊರತೆ ಮತ್ತು ಆಯಾಸದಿಂದ ಆಕಳಿಕೆ ಉಂಟಾಗುತ್ತದೆ. ಆದರೆ ಆಕಳಿಕೆ ಹೆಚ್ಚಿದ್ದರೆ, ಅದು ಅನೇಕ ರೋಗಗಳ ಸಂಕೇತವಾಗಿದೆ. ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ದಿನಕ್ಕೆ 5 ರಿಂದ 19 ಬಾರಿ ಆಕಳಿಸಬಹುದು. ಆದರೆ ಅದನ್ನು ಮೀರಿ ಆಕಳಿಕೆ ಎಂದರೆ ನೀವು ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದೀರಿ ಎಂದರ್ಥ. ಹೌದು, ಅದನ್ನು ನಿರ್ಲಕ್ಷಿಸುವುದು ಅಪಾಯವನ್ನು ಹೆಚ್ಚಿಸುತ್ತದೆ. ಈ ಬಗ್ಗೆ ವೈದ್ಯಕೀಯ ಸಂಶೋಧನೆ ಏನು ಹೇಳುತ್ತಿದೆ ಎಂದು ತಿಳಿದರೆ ನೀವು ಆಘಾತಕ್ಕೊಳಗಾಗುತ್ತೀರಿ. […]

Advertisement

Wordpress Social Share Plugin powered by Ultimatelysocial