ನಾನು ಯಾವುದೇ ಅವ್ಯವಹಾರ, ಭ್ರಷ್ಟಾಚಾರ ನಡೆಸಿಲ್ಲ, ಸೂಕ್ತ ಮಾಹಿತಿಯಿಲ್ಲದೆ ಸಿಐಡಿ ನನ್ನನ್ನು ಬಂಧಿಸಿದೆ: ಚಂದ್ರಬಾಬು ನಾಯ್ಡು

ನಾನು ಯಾವುದೇ ಅವ್ಯವಹಾರ ಅಥವಾ ಭ್ರಷ್ಟಾಚಾರ ಮಾಡಿಲ್ಲ. ಸೂಕ್ತ ಮಾಹಿತಿಗಳಿಲ್ಲದೆಯೇ ಸಿಐಡಿ ಅಧಿಕಾರಿಗಳು ನನ್ನನ್ನು ಬಂಧನಕ್ಕೊಳಪಡಿಸಿದ್ದಾರೆಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಶನಿವಾರ ಹೇಳಿದ್ದಾರೆ. ಕರ್ನೂಲ್: ನಾನು ಯಾವುದೇ ಅವ್ಯವಹಾರ ಅಥವಾ ಭ್ರಷ್ಟಾಚಾರ ಮಾಡಿಲ್ಲ. ಸೂಕ್ತ ಮಾಹಿತಿಗಳಿಲ್ಲದೆಯೇ ಸಿಐಡಿ ಅಧಿಕಾರಿಗಳು ನನ್ನನ್ನು ಬಂಧನಕ್ಕೊಳಪಡಿಸಿದ್ದಾರೆಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಶನಿವಾರ ಹೇಳಿದ್ದಾರೆ.
ವಿಜಯವಾಡಕ್ಕೆ ಸ್ಥಳಾಂತರಗೊಳ್ಳುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಜನರ ಸಮಸ್ಯೆ ಬಗೆಹರಿಸಲು ಹೋರಾಟ ನಡೆಸುತ್ತಿದ್ದೇನೆ. ನನ್ನ ಧ್ವನಿಯನ್ನು ಹತ್ತಿಕ್ಕಲು ಬಂಧನಕ್ಕೊಳಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬಂಧನ ವಿಚಾರವಾಗಿ ಸಿಐಡಿ ಅಧಿಕಾರಿಗಳು ಯಾವುದೇ ಮಾಹಿತಿಗಳನ್ನು ನೀಡುತ್ತಿಲ್ಲ. ಯಾವ ಕಾರಣಕ್ಕೆ ನನ್ನನ್ನು ಬಂಧಿಸಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ.
ಆದರೆ, ಪೊಲೀಸರು ಯಾವುದೇ ಮಾಹಿತಿ ನೀಡುತ್ತಿಲ್ಲ. ನಾನು ಮುಗ್ಧ. ಯಾವುದೇ ಭ್ರಷ್ಟಾಚಾರವಾಗಲೀ, ಅವ್ಯವಹಾರವಾಗಲೀ ನಡೆಸಿಲ್ಲ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ.
ಅಧಿಕಾರಿಗಳು ಸಮರ್ಥಿಸಿಕೊಳ್ಳಲು ಅವರ ಬಳಿ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ.
ಸ್ಕಿಲ್​ ಡೆವಲಪ್​​ಮೆಂಟ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಅಧಿಕಾರಿಗಳು ಇಂದು ಬಂಧನಕ್ಕೊಳಪಡಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರನ್ನು ಐಪಿಸಿ ಸೆಕ್ಷನ್ 120 (8), 166, 167, 418, 420, 465, 468, 471, 409, 201, 34 & 37 ಹಾಗೂ ಭ್ರಷ್ಟಾಚಾರ ತಡೆ ಕಾಯಿದೆ, 1988 ಇತರ ವಿಭಾಗಗಳಡಿ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
Please follow and like us:

tmadmin

Leave a Reply

Your email address will not be published. Required fields are marked *

Next Post

ರೈಲ್ವೇ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದ್ದಿ, ಈಗ ರೈಲಿನ ಸಂಪೂರ್ಣ ಬೋಗಿಯನ್ನು ಕಾಯ್ದಿರಿಸುವವರಿಗೆ ಕ್ಯಾಟರಿಂಗ್ ಸೇವೆಗಳನ್ನು ಒದಗಿಸಲಿದೆ. ಹೌದು. ಫ್ಯಾಮಿಲಿ, ಸ್ನೇಹಿತರ ಜೊತೆ ಗುಂಪು ಗುಂಪಾಗಿ ಪ್ರವಾಸಕ್ಕೆ ಹೋಗುವವರು ರೈಲಿನ ಸಂಪೂರ್ಣ ಬೋಗಿಯನ್ನು ಕಾಯ್ದಿರಿಸಬಹುದು ಎಂದು ತಿಳಿದುಬಂದಿದೆ.ಮದುವೆ, ಇತರ ಕಾರ್ಯಕ್ರಮಗಳು ಮತ್ತು ಪ್ರವಾಸಗಳ ಭಾಗವಾಗಿ ದೂರದ ಸ್ಥಳಗಳಿಗೆ ಹೋಗುವವರು ರೈಲಿನಲ್ಲಿ ಸಂಪೂರ್ಣ ಬೋಗಿಯನ್ನು ಕಾಯ್ದಿರಿಸಬೇಕಾಗುತ್ತದೆ. ಇದನ್ನು ಪೂರ್ಣ ಸುಂಕ ದರ ಸೇವೆ ಎಂದು ಕರೆಯಲಾಗುತ್ತದೆ. ಐಆರ್ಸಿಟಿಸಿ ಪೂರ್ಣ ಸುಂಕದ ದರದಲ್ಲಿ ಕಾಯ್ದಿರಿಸಿದ ಬೋಗಿಗಳು ಮತ್ತು ರೈಲುಗಳಲ್ಲಿ ಎಲ್ಲಾ ಅಡುಗೆ ಸೌಲಭ್ಯಗಳನ್ನು ಒದಗಿಸುತ್ತದೆ. ಅಂತಹ ವಿಶೇಷ ಬೋಗಿಗಳು ಅಥವಾ ರೈಲುಗಳಲ್ಲಿ ಕ್ಯಾಟರಿಂಗ್ ಸೌಲಭ್ಯಗಳನ್ನು ಐಆರ್ಸಿಟಿಸಿ ಮೂಲಕ ಮಾತ್ರ ಕಾಯ್ದಿರಿಸಬಹುದು ಎಂದು ಭಾರತೀಯ ರೈಲ್ವೆ ಘೋಷಿಸಿದೆ. ಬುಕಿಂಗ್ ಅನ್ನು ಗರಿಷ್ಠ ಆರು ತಿಂಗಳ ಮುಂಚಿತವಾಗಿ ಅಥವಾ ಪ್ರಯಾಣದ ದಿನಾಂಕಕ್ಕೆ ಕನಿಷ್ಠ 30 ದಿನಗಳ ಮೊದಲು ಮಾಡಬಹುದು. ಪ್ರವಾಸ ಕಾರ್ಯಕ್ರಮಕ್ಕಾಗಿ ರೈಲಿನಲ್ಲಿ ಗರಿಷ್ಠ s10 ಬೋಗಿಗಳನ್ನು ಕಾಯ್ದಿರಿಸಬಹುದು. ಇಡೀ ರೈಲಿಗೆ, ಎರಡು ಸ್ಲೀಪರ್ ಬೋಗಿಗಳು ಸೇರಿದಂತೆ ಗರಿಷ್ಠ 24 ಬೋಗಿಗಳನ್ನು ಕಾಯ್ದಿರಿಸಬಹುದು.ಸಂಪೂರ್ಣ ದರ ಸೇವೆಯನ್ನು ಪ್ರಯಾಣಿಕರು ಅಥವಾ ಸಂಸ್ಥೆಗಳು ಎಫ್ಟಿಆರ್ ವೆಬ್ಸೈಟ್ ಮೂಲಕ ಇಡೀ ರೈಲು ಅಥವಾ ಕೆಲವು ಬೋಗಿಗಳಿಗೆ ಕಾಯ್ದಿರಿಸಬಹುದು. ಆನ್ಲೈನ್ ಬುಕಿಂಗ್ ಮಾಡಿದರೆ ಎಫ್ಟಿಆರ್ ರೈಲು ರೈಲ್ವೆ ವಿಭಾಗಗಳ ನಿಲ್ದಾಣಗಳಿಂದ ಪ್ರಯಾಣಿಸಬಹುದು. ಏಳು ದಿನಗಳ ಪ್ರಯಾಣಕ್ಕಾಗಿ ಬೋಗಿಯನ್ನು ಕಾಯ್ದಿರಿಸಲು, ನೀವು ಪ್ರತಿ ಬೋಗಿಗೆ 50,000 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಪ್ರಯಾಣವನ್ನು ವಿಸ್ತರಿಸುವ ಸಾಧ್ಯತೆಯಿದ್ದರೆ, ಪ್ರತಿ ಹೆಚ್ಚುವರಿ ದಿನಕ್ಕೆ, ಪ್ರತಿ ಕೋಚ್ ದಿನಕ್ಕೆ 10,000 ರೂ.ಗಳನ್ನು ಪಾವತಿಸಬೇಕಾಗುತ್ತದೆ. ರೈಲ್ವೆ ಕಚೇರಿಯ ಮುಖ್ಯ ಬುಕಿಂಗ್ ಮೇಲ್ವಿಚಾರಕರನ್ನು ಸಂಪರ್ಕಿಸಿ ಮತ್ತು ಪ್ರಯಾಣದ ವಿವರಗಳೊಂದಿಗೆ ಲಿಖಿತ ವಿನಂತಿಯನ್ನು ನೀಡಿ. ಸಿಸ್ಟಮ್ ರಚಿಸಿದ ಸ್ಲಿಪ್ ಅನ್ನು ತೆಗೆದುಕೊಂಡು ಯುಟಿಎಸ್ ಕೌಂಟರ್ ಗೆ ಹೋಗಿ. ಹಣವನ್ನು ಠೇವಣಿ ಮಾಡಿ ಮತ್ತು ರಸೀದಿಯನ್ನು ತೆಗೆದುಕೊಳ್ಳಿ. ಬುಕಿಂಗ್ ದೃಢಪಡಿಸಿದ ನಂತರ, ಪ್ರಯಾಣಿಕರ ಪಟ್ಟಿಯನ್ನು ರೈಲು ಹೊರಡುವ ನಿಲ್ದಾಣದ ವ್ಯವಸ್ಥಾಪಕರಿಗೆ ನೀಡಬೇಕು. ftr.irctc.co.in ವೆಬ್ಸೈಟ್ನಲ್ಲಿಯೂ ಬುಕಿಂಗ್ ಮಾಡಬಹುದು.

Sat Sep 9 , 2023
ರೈಲ್ವೇ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದ್ದಿ, ಈಗ ರೈಲಿನ ಸಂಪೂರ್ಣ ಬೋಗಿಯನ್ನು ಕಾಯ್ದಿರಿಸುವವರಿಗೆ ಕ್ಯಾಟರಿಂಗ್ ಸೇವೆಗಳನ್ನು ಒದಗಿಸಲಿದೆ. ಹೌದು. ಫ್ಯಾಮಿಲಿ, ಸ್ನೇಹಿತರ ಜೊತೆ ಗುಂಪು ಗುಂಪಾಗಿ ಪ್ರವಾಸಕ್ಕೆ ಹೋಗುವವರು ರೈಲಿನ ಸಂಪೂರ್ಣ ಬೋಗಿಯನ್ನು ಕಾಯ್ದಿರಿಸಬಹುದು ಎಂದು ತಿಳಿದುಬಂದಿದೆ.ಮದುವೆ, ಇತರ ಕಾರ್ಯಕ್ರಮಗಳು ಮತ್ತು ಪ್ರವಾಸಗಳ ಭಾಗವಾಗಿ ದೂರದ ಸ್ಥಳಗಳಿಗೆ ಹೋಗುವವರು ರೈಲಿನಲ್ಲಿ ಸಂಪೂರ್ಣ ಬೋಗಿಯನ್ನು ಕಾಯ್ದಿರಿಸಬೇಕಾಗುತ್ತದೆ.   ಇದನ್ನು ಪೂರ್ಣ ಸುಂಕ ದರ ಸೇವೆ ಎಂದು ಕರೆಯಲಾಗುತ್ತದೆ. ಐಆರ್ಸಿಟಿಸಿ […]

Advertisement

Wordpress Social Share Plugin powered by Ultimatelysocial