ನೂತನ ಸಂಸತ್‍ ಭವನದಲ್ಲಿ ಧ್ವಜಾರೋಹಣ ನೆರವೇರಿಸಿದ ಉಪರಾಷ್ಟ್ರಪತಿ

ವದೆಹಲಿ,ಸೆ.17- ಸಂಸತ್‍ನ ನೂತನ ಭವನದಲ್ಲಿ ಇಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದಾರೆ. ಲೋಕಸಭೆಯ ಅಧ್ಯಕ್ಷ ಹೋಂಬಿರ್ಲಾ ಅವರೊಂದಿಗೆ ಹೊಸ ಸಂಸತ್ ಗಜದ್ವಾರದಲ್ಲಿ ಧ್ವಜಾರೋಹಣ ನಡೆದಿದೆ. ಈ ಮೂಲಕ ಸೋಮವಾರದಿಂದ ಆರಂಭಗೊಳ್ಳುವ 5 ದಿನಗಳ ಅಧಿವೇಶನ ಹೊಸಭವನದಲ್ಲೇ ನಡೆಯಲು ಸಿದ್ಧತೆ ನಡೆದಿವೆ.

 

ಸಂಸತ್ ಅಧಿವೇಶನಕ್ಕೂ ಮುನ್ನ ಉಭಯ ಸದನಗಳ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸುವ ಸಂಪ್ರದಾಯ ಮೊದಲಿನಿಂದಲೂ ಜಾರಿಯಲ್ಲಿದೆ.

ಸರ್ವಾಧಿಕಾರಿ ಆಡಳಿತವನ್ನು ಕಿತ್ತೊಗೆಯಲು ಸಂಘಟನಾತ್ಮಕ ಹೋರಾಟ: ಮಲ್ಲಿಕಾರ್ಜುನ ಖರ್ಗೆ

ಅದರ ಮುಂದುವರೆದ ಭಾಗವಾಗಿ ಇಂದು ಹೊಸ ಸಂಸತ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಲಾಗಿದೆ. ಇದಕ್ಕೂ ಮುನ್ನ ಸಿಆರ್‍ಪಿಎಫ್ ಪಡೆಗಳು ಜಗದೀಪ್ ಧನಕರ್ ಹಾಗೂ ಹೋಂಬಿರ್ಲಾ ಅವರಿಗೆ ಪ್ರತ್ಯೇಕವಾಗಿ ಗೌರವ ವಂದನೆ ಸಲ್ಲಿಸಿದರು.

Please follow and like us:

tmadmin

Leave a Reply

Your email address will not be published. Required fields are marked *

Next Post

BIG NEWS: ಖ್ಯಾತ ಮಲಯಾಳಂ ಲೇಖಕ ಮತ್ತು ಶಿಕ್ಷಣ ತಜ್ಞ ಸಿ ಆರ್ ಓಮನಕುಟ್ಟನ್ ಹೃದಯಾಘಾತದಿಂದ ನಿಧನ | CR Omanakuttan passes away

Sun Sep 17 , 2023
ಕೊಚ್ಚಿ: ಮಲಯಾಳಂ ಲೇಖಕ ಮತ್ತು ಶಿಕ್ಷಣ ತಜ್ಞ ಸಿ ಆರ್ ಓಮನಕುಟ್ಟನ್ (80) ಅವರು ಶನಿವಾರ ಹೃದಯಾಘಾತದಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 1943 ರಲ್ಲಿ ಕೊಟ್ಟಾಯಂನ ತಿರುನಕ್ಕರದಲ್ಲಿ ಜನಿಸಿದ ಓಮನಕುಟ್ಟನ್ ನಾಲ್ಕು ವರ್ಷಗಳ ಕಾಲ ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮಾಹಿತಿ ಅಧಿಕಾರಿಯಾಗಿ ಕೆಲಸ ಮಾಡಿದರು. ನಂತರ ಅವರು ಅಧ್ಯಾಪಕ ವೃತ್ತಿಯನ್ನು ಆರಿಸಿಕೊಂಡರು ಮತ್ತು ಕೋಝಿಕ್ಕೋಡ್ ಮೀಂಚಂತಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದರು. ಒಂದು ವರ್ಷದ ನಂತರ ಅವರು ಎರ್ನಾಕುಲಂ ಮಹಾರಾಜ […]

Advertisement

Wordpress Social Share Plugin powered by Ultimatelysocial