ಪ್ರೀತ್ಸೆ ಅಂತ ಅಪ್ರಾಪ್ತೆ ಹಿಂದೆ ಬಿದ್ದು ಪ್ರಾಣ ತಿನ್ನುತ್ತಿದ್ದ ಯುವಕ, ಕೊನೆಗೆ ಮಾಡಿದ್ದೇನು..?

ತನ್ನ ಮಗಳ ಸಹವಾಸಕ್ಕೆ ಬರಬೇಡ ಅಂದಿದ್ದಕ್ಕೆ ಅಪ್ಪನಿಗೆ ಏನ್ ಮಾಡಿದ ಗೊತ್ತಾ?

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಸಿಲ್ಲಿ, ಸಿಲ್ಲಿ ಕಾರಣಗಳಿಗೆಲ್ಲಾ ರಕ್ತದೋಕುಳಿ ಆಡಲಾಗುತ್ತೆ. ಇಲ್ಲೊಬ್ಬ ಪಾತಕಿ ಪ್ರೀತ್ಸೆ ಅಂತ ಅಪ್ರಾಪ್ತೆ ಹಿಂದೆ ಬಿದ್ದು ಅಡ್ಡಿ ಬಂದ ಆಕೆಯ ಅಪ್ಪನ ಜೀವವನ್ನೇ ತೆಗೆದಿದ್ದಾನೆ. ಮಗಳ ಸಹವಾಸಕ್ಕೆ ಬರಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಅಪ್ಪನ ಮರ್ಡರ್ ಆಗಿದೆ.

ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ಬಳಿ ಈ ಭಯಾನಕ ಹತ್ಯೆ ನಡೆದಿದೆ. ಕೊಲೆ ಆರೋಪಿ ಝಹೀದ್‌ ಪ್ರೀತಿಸುವಂತೆ 15 ವರ್ಷದ ಅಪ್ರಾಪ್ತೆಯ ಬೆನ್ನು ಬಿದ್ದಿದ್ದ. ಶಾಲೆಗೆ ಹೋಗುವಾಗ, ಬರುವಾಗ ಪ್ರೀತ್ಸೆ ಅಂತ ಪ್ರಾಣ ತಿನ್ನುತ್ತಿದ್ದ ಎನ್ನಲಾಗಿದೆ. ಕೊನೆಗೆ ಮಗಳು ಬೇಸತ್ತು ಈ ಪೋಲಿಯ ವಿಚಾರವನ್ನ ತನ್ನ ತಂದೆ ಮೃತ ಅನ್ವರ್ ಹುಸೇನ್‌ಗೆ ತಿಳಿಸಿದ್ದಾಳೆ.

ಕಳೆದ ಮೂರು ತಿಂಗಳ ಹಿಂದೆ ಆರೋಪಿ ಝಹೀದ್‌ಗೆ ಮೃತ ಅನ್ವರ್‌ ಬುದ್ಧಿವಾದ ಹೇಳಿದ್ದಾನೆ. ಪಾತಕಿ ಝಹೀದ್‌ ನಿನ್ನೆ ಮತ್ತೆ ಅಪ್ರಾಪ್ತೆಯನ್ನ ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸಿದ್ದಾನೆ. ಮಗಳ ವಿಚಾರಕ್ಕೆ ಮತ್ತೆ ಬರಬೇಡ ಎಂದು ಹೇಳಲು ಹೋದಾಗ ಝಹೀದ್‌, ಅನ್ವರ್​ ಹುಸೇನ್​ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಡೆಡ್ಲಿ ಮರ್ಡರ್ ಮಾಡಿದ ಬಳಿಕ ಝಹೀದ್‌ ಪರಾರಿಯಾಗಿದ್ದು, ಅಶೋಕನಗರ ಪೊಲೀಸ್ರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

ವೈದ್ಯರ ನಿರ್ಲಕ್ಷ್ಯಕ್ಕೆ ಗೃಹಣಿ ಬಲಿ..!

Sun Sep 3 , 2023
ಮಕ್ಕಳಾಗಿಲ್ಲವೆಂದು ಒಂದೂವರೆ ತಿಂಗಳಿಂದ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ..! ವೈದ್ಯರ ನಿರ್ಲಕ್ಷ್ಯಕ್ಕೆ ಅತಿಥಿ ಉಪನ್ಯಾಸಕಿ ಸಾವನ್ನಪ್ಪಿರೋ ಘಟನೆ ತುಮಕೂರಿನ ಮಹಾಲಕ್ಷ್ಮಿನಗರದಲ್ಲಿನ ಚಿನ್ಮಯ ನರ್ಸಿಂಗ್ ಹೋಮ್​ನಲ್ಲಿ ನಡೆದಿದೆ. ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಕುಟುಂಬಸ್ಥರು ಹಾಗೂ ಪತಿ ಆರೋಪಿಸಿದ್ದಾರೆ. ಅತಿಥಿ ಉಪನ್ಯಾಸಕಿ ಮಾನಸ (30) ಮೃತ ದುರ್ದೈವಿ. ಮಾನಸ ಅವರು ತುಮಕೂರಿನ ವಿವಿಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. 5 ವರ್ಷಗಳ ಹಿಂದೆ ಅರುಣ್ ಎಂಬುವರನ್ನು ವರಿಸಿದ್ದರು. ನಂತರದ ದಾಂಪತ್ಯ […]

Advertisement

Wordpress Social Share Plugin powered by Ultimatelysocial