ದಾವಣಗೆರೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಾವು ಸಿಎಂ ಆದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಜಾತ್ರೆಯಲ್ಲಿ ಗುರುವಾರ ಮಾತನಾಡಿದ ಅವರು, ‘ನಾನೇನು ಬಯಸಿ ಬಯಸಿ ಸಿಎಂ ಆದವನಲ್ಲ.
ಪ್ರಧಾನಿ ಮೋದಿ ಹಾಗೂ ಜನರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ’ ಎಂದು ಹೇಳಿದರು.
ಸಿಎಂ ಆದ ವಿಚಾರ ಬಿಚ್ಚಿಟ್ಟ ಬೊಮ್ಮಾಯಿಯವರು ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಹೆಸರು ಹೇಳಲು ಮರೆತರು. ‘ನಿಮ್ಮ ಆಶೀರ್ವಾದ ವ್ಯರ್ಥವಾಗಲು ಬಿಡುವುದಿಲ್ಲ. ನನ್ನ ಒಂದೇ ಒಂದು ಗುರಿ ವಾಲ್ಮೀಕಿ ಸಮಾಜಕ್ಕೆ ನ್ಯಾಯ ಕೊಡುವುದು. ಮೀಸಲಾತಿ ನನ್ನ ಅವಧಿಯಲ್ಲಿ ಆಗಿದ್ದು ನನ್ನ ಸೌಭಾಗ್ಯ’ ಎಂದು ಇದೇ ವೇಳೆ ಅವರು ಹೇಳಿದರು.
ಇದೇ ವೇಳೆ ವಾಲ್ಮೀಕಿ ಸ್ವಾಮೀಜಿಯ ಕ್ಷಮೆ ಕೋರಿದ ಸಿಎಂ ಬೊಮ್ಮಾಯಿ, ಮೀಸಲಾತಿಗಾಗಿ 257 ದಿನ ಪ್ರಸನ್ನಾನಂದ ಶ್ರೀ ಧರಣಿ ಕುಳಿತರು. ಈ ಮೂಲಕ ಅವರಿಗೆ ತೊಂದರೆ ಕೊಟ್ಟಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಮುಂಬರುವ ಎಲ್ಲಾ ನೇಮಕಾತಿ, ಪ್ರಮೋಶನ್ ಹೊಸ ಮೀಸಲಾತಿಯಡಿ ನಡೆಯುತ್ತಿದೆ’ ಎಂದು ಹೇಳಿದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ, 9th ಶೆಡ್ಯೂಲ್ಡ್ ಬಗ್ಗೆ ಮಾತಾಡ್ತಿರಾ? ಮೊದಲೇ ನೀವುಮೀಸಲಾತಿಘೋಷಣೆ ಮಾಡಿದ್ರೆ ಇವತ್ತು ನಮಗೆ 9th ಶೆಡ್ಯೂಲ್ಡ್ ಮಾಡಲು ಅನುಕೂಲವಾಗುತ್ತಿತ್ತು. ಈಗಾಗಲೇ ನಾವು ಮೊದಲ ಹೆಜ್ಜೆ ಇಟ್ಟಿದ್ದೆವೆ, 9th ಶೆಡ್ಯೂಲ್ 2ನೇ ಹೆಜ್ಜೆ ಇಡುತ್ತೇವೆ’ ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada