ಸಾರ್ವಜನಿಕರ ಹಿತದೃಷ್ಟಿಯಿಂದ ಅಂಗಡಿಯ ಮುಂಗಟ್ಟುಗಳು ಸಂಸ್ಥೆಗಳು ಹಾಗೂ ಇತರೆ ಮಳಿಗೆಗಳು ಕಟ್ಟುನಿಟ್ಟಾಗಿ ಮಾಸ್ಕ್ , ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಬೇಕು ಮಳಿಗೆಗಳ ಮುಂದೆ ಜನಸಂದಣಿ ಧೂಮಪಾನ, ಸೇರಿದಂತೆ, ಸುಖಾಸುಮ್ಮನೆ ನಿಂತಿರುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಮಳಿಗೆ ಮಾಲೀಕರುಇದರ ಬಗ್ಗೆ ಗಮನಹರಿಸಬೇಕು. ಸೋಂಕು ಹರಡದಂತೆ ತಮ್ಮ ಜವಾಬ್ದಾರಿಯನ್ನು ನಡೆಯಬೇಕಾಗಿದೆ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ