ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಆಗಬಾರದು

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತನ ಬೆನ್ನೆಲುಬು ಮುರಿಯುವ ನಿರ್ಧಾರ ಎಂದು ಮಾಜಿ ಸಂಸದ ಆರ್ ಧೃವನಾರಾಯಣ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಲು ಮುಂದಾಗಿದೆ. ಇದು ಅಪಾಯಕಾರಿ ಬೆಳವಣಿಗೆ. ನಾವು ಕೃಷಿಯಲ್ಲಿ ಸ್ವಾವಲಂಬಿ ಆಗಿದ್ದೇವೆ. ಇವರು ಕಾಯ್ದೆ ತಿದ್ದುಪಡಿ ಮಾಡಿ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಎಲ್ಲವನ್ನು ಅಂಬಾನಿ-ಅದಾನಿಯAತವರಿಗೆ ಕೊಟ್ಟರೆ ಬಡವರು ಏನು ಮಾಡಬೇಕು. ಬಿಜೆಪಿಯವರು ಎಲ್ಲವನ್ನು ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಇದು ರೈತ ಹಾಗೂ ಸಣ್ಣ ರೈತರಿಗೆ ಮಾರಕ ಬೆಳವಣಿಗೆ ಆಗಲಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಆಗಬಾರದು. ರೈತರಿಗೆ ಭೂಮಿ ಕೊಡಿಸಲು ಹೋರಾಟ ಮಾಡಿದ್ದ ಯಡಿಯೂರಪ್ಪ ಈ ರೀತಿ ಬದಲಾಗಿರೋದು ಯಾಕೆ ಅನ್ನೋ ಪ್ರಶ್ನೆ ಮೂಡಿದೆ. ಯಾವುದೇ ಕಾರಣಕ್ಕೂ ಕಾಯ್ದೆ ತಿದ್ದುಪಡಿ ಆಗಬಾರದು ಎಂದು ತೀವ್ರವಾಗಿ ವಿರೋಧಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಜನಪ್ರತಿನಿಧಿಗಳು ಅಲ್ಲ ನಾವು

Mon Jun 15 , 2020
ಬಿಜೆಪಿ ಸರ್ಕಾರ ಯಾವುದೇ ಪಕ್ಷ, ಜಾತಿ ನೋಡಿ ಕೆಲಸ ಮಾಡಲ್ಲ, ಲೇಟರ್ ಕೊಟ್ಟು ಮಿಟಿಂಗ್ ಮಾಡಿ, ಶೋ ಮಾಡುವ ಪಕ್ಷ ನಮ್ಮದಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರ ಇರಲಿ, ಚಾಲೆಂಜ್ ಮಾಡುವವರು ಬುದ್ಧಿ ಇರುವಂತಹವರು ಮಾಡುತ್ತಾರೆ. ಕಾಂಗ್ರೆಸ್ ಜನಪ್ರತಿನಿಧಿಗಳು ಅಲ್ಲ ನಾವು, ಸರ್ಕಾರದ ಜನಪ್ರತಿನಿಧಿಗಳು. ಎಂಟಿಬಿ ಮತ್ತು ವಿಶ್ವನಾಥ್ ಬಗ್ಗೆ ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಲಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ […]

Advertisement

Wordpress Social Share Plugin powered by Ultimatelysocial