ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತನ ಬೆನ್ನೆಲುಬು ಮುರಿಯುವ ನಿರ್ಧಾರ ಎಂದು ಮಾಜಿ ಸಂಸದ ಆರ್ ಧೃವನಾರಾಯಣ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಲು ಮುಂದಾಗಿದೆ. ಇದು ಅಪಾಯಕಾರಿ ಬೆಳವಣಿಗೆ. ನಾವು ಕೃಷಿಯಲ್ಲಿ ಸ್ವಾವಲಂಬಿ ಆಗಿದ್ದೇವೆ. ಇವರು ಕಾಯ್ದೆ ತಿದ್ದುಪಡಿ ಮಾಡಿ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಎಲ್ಲವನ್ನು ಅಂಬಾನಿ-ಅದಾನಿಯAತವರಿಗೆ ಕೊಟ್ಟರೆ ಬಡವರು ಏನು ಮಾಡಬೇಕು. ಬಿಜೆಪಿಯವರು ಎಲ್ಲವನ್ನು ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಇದು ರೈತ ಹಾಗೂ ಸಣ್ಣ ರೈತರಿಗೆ ಮಾರಕ ಬೆಳವಣಿಗೆ ಆಗಲಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಆಗಬಾರದು. ರೈತರಿಗೆ ಭೂಮಿ ಕೊಡಿಸಲು ಹೋರಾಟ ಮಾಡಿದ್ದ ಯಡಿಯೂರಪ್ಪ ಈ ರೀತಿ ಬದಲಾಗಿರೋದು ಯಾಕೆ ಅನ್ನೋ ಪ್ರಶ್ನೆ ಮೂಡಿದೆ. ಯಾವುದೇ ಕಾರಣಕ್ಕೂ ಕಾಯ್ದೆ ತಿದ್ದುಪಡಿ ಆಗಬಾರದು ಎಂದು ತೀವ್ರವಾಗಿ ವಿರೋಧಿಸಿದ್ದಾರೆ.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಆಗಬಾರದು
Please follow and like us: