ಬಿಜೆಪಿ ಸರ್ಕಾರ ಯಾವುದೇ ಪಕ್ಷ, ಜಾತಿ ನೋಡಿ ಕೆಲಸ ಮಾಡಲ್ಲ, ಲೇಟರ್ ಕೊಟ್ಟು ಮಿಟಿಂಗ್ ಮಾಡಿ, ಶೋ ಮಾಡುವ ಪಕ್ಷ ನಮ್ಮದಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರ ಇರಲಿ, ಚಾಲೆಂಜ್ ಮಾಡುವವರು ಬುದ್ಧಿ ಇರುವಂತಹವರು ಮಾಡುತ್ತಾರೆ. ಕಾಂಗ್ರೆಸ್ ಜನಪ್ರತಿನಿಧಿಗಳು ಅಲ್ಲ ನಾವು, ಸರ್ಕಾರದ ಜನಪ್ರತಿನಿಧಿಗಳು. ಎಂಟಿಬಿ ಮತ್ತು ವಿಶ್ವನಾಥ್ ಬಗ್ಗೆ ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಲಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಬಾಲಚಂದ್ರ, ಉಮೇಶ್ ಕತ್ತಿ ತೀರ್ಮಾನ ಮಾಡ್ತಾರೆ. ಬೆಳಗಾವಿ ಗ್ರಾಮೀಣದ ಬಗ್ಗೆ ಸಾಕಷ್ಟು ಜನರು ಪೋನ್ನಲ್ಲಿ ದೂರು ನೀಡಿದರು. ಆದರೆ, ಯಾಕೆ ಸಭೆಯಲ್ಲಿ ಮಾತನಾಡಲಿಲ್ಲ ಗೊತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಜನಪ್ರತಿನಿಧಿಗಳು ಅಲ್ಲ ನಾವು
Please follow and like us: