ಕುಂಬಳೆ: ಕೇಂದ್ರ ಸರಕಾರವು ಸಣ್ಣ ಕೃಷಿಕರಿಗೆ ಕಿಸಾನ್ ಸಮ್ಮಾನ್ಯೋಜನೆಯನ್ನು ಜಾರಿಗೆ ತಂದಿದ್ದು, ವರ್ಷದಲ್ಲಿ ಮೂರು ಬಾರಿ 2 ಸಾವಿ ರ ದಂತೆ ಒಟ್ಟು 6 ಸಾವಿರ ರೂ. ಖಾತೆಗೆ ಜಮೆಯಾಗುವುದು. ಆದರೆ ಈ ಬಾರಿ ಫಲಾನುಭವಿಗಳ ಖಾತೆಗೆ ಹಣ ಬಂದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ಕೃಷಿಕರು ತಮ್ಮ ಸ್ಥಳದ ಕೃಷಿ ವಿವರಗಳು, ಕರ ಪಾವತಿಸಿದ ರಶೀದಿ, ಬ್ಯಾಂಕ್ ಖಾತೆಯ ವಿವರ ಮತ್ತು ತಮ್ಮ ಆಧಾರ್ ಕಾರ್ಡಿನ ಮೊಬೈಲ್ ನಂಬರನ್ನು ಆನ್ಲೈನ್ ಮೂಲಕ ದಾಖಲಿಸಬೇಕೆಂಬ ಆದೇಶದಂತೆ ಹೆಚ್ಚಿನ ಫಲಾನುಭವಿಗಳು ಅಕ್ಷಯ ಕೇಂದ್ರಗಳಿಗೆ ತೆರಳಿ ದಾಖಲೆಗಳನ್ನು ಕೃಷಿ ಭವನಕ್ಕೆ ಸಲ್ಲಿಸಿದ್ದಾರೆ. ಅಲ್ಲಿ ಇದಕ್ಕೆ 50 ರೂ.ಗಳನ್ನು ಯಾವುದೇ ರಶೀದಿ ನೀಡದೆ ಸೇವಾ ಶುಲ್ಕ ಎಂದು ವಸೂಲಿ ಮಾಡಿದ್ದಾರೆ ಎಂಬ ಆರೋಪವೂ ಇದೆ. ಆದರೆ ಈ ತನಕ ಯೋಜನೆಯಲ್ಲಿ ಹೆಚ್ಚಿನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. ಕೃಷಿ ಭವನದ ಅಧಿಕಾರಿಗಳು ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾ ಕೃಷಿ ಕಚೇರಿಗೆ ಸಲ್ಲಿಸಬೇಕಾಗಿದೆ. ಅಲ್ಲಿಂದ ಪಟ್ಟಿಯನ್ನು ರಾಜ್ಯ ಸರಕಾರದ ಕೃಷಿ ಇಲಾಖೆ ಕಚೇರಿಗೆ ಸಲ್ಲಿಸ ಬೇಕು. ರಾಜ್ಯ ಕೃಷಿ ಅಧಿಕಾರಿಗಳು ಕೇಂದ್ರ ಕಚೇರಿಗೆ ಮಾಹಿತಿ ದಾಖಲಿಸಿದಲ್ಲಿ ಫಲಾನುಭವಿಗಳ ಖಾತೆಗೆ ಹಣ ಪಾವತಿ ಯಾಗುತ್ತಿದೆ. ಆದರೆ ಇದೀಗ ಜಿಲ್ಲಾ ಕೃಷಿ ಕಚೇರಿಯಿಂದ ಪಟ್ಟಿ ರಾಜ್ಯ ಅಧಿಕಾರಿಗಳಿಗೆ ರವಾನೆಯಾಗದ ಕಾರಣ ಹಣ ಖಾತೆಗೆ ಪಾವತಿಯಾಗಿಲ್ಲ ಎನ್ನಲಾಗಿದೆ.
https://play.google.com/store/apps/details?id=com.speed.newskannada