ಈ ಬಾರಿ ಫಲಾನುಭವಿಗಳ ಖಾತೆಗೆ ಹಣ ಬಂದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

 

ಕುಂಬಳೆ: ಕೇಂದ್ರ ಸರಕಾರವು ಸಣ್ಣ ಕೃಷಿಕರಿಗೆ ಕಿಸಾನ್‌ ಸಮ್ಮಾನ್‌ಯೋಜನೆಯನ್ನು ಜಾರಿಗೆ ತಂದಿದ್ದು, ವರ್ಷದಲ್ಲಿ ಮೂರು ಬಾರಿ 2 ಸಾವಿ ರ ದಂತೆ ಒಟ್ಟು 6 ಸಾವಿರ ರೂ. ಖಾತೆಗೆ ಜಮೆಯಾಗುವುದು. ಆದರೆ ಈ ಬಾರಿ ಫಲಾನುಭವಿಗಳ ಖಾತೆಗೆ ಹಣ ಬಂದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಕಿಸಾನ್‌ ಸಮ್ಮಾನ್‌ ಯೋಜನೆಗೆ ಕೃಷಿಕರು ತಮ್ಮ ಸ್ಥಳದ ಕೃಷಿ ವಿವರಗಳು, ಕರ ಪಾವತಿಸಿದ ರಶೀದಿ, ಬ್ಯಾಂಕ್‌ ಖಾತೆಯ ವಿವರ ಮತ್ತು ತಮ್ಮ ಆಧಾರ್‌ ಕಾರ್ಡಿನ ಮೊಬೈಲ್‌ ನಂಬರನ್ನು ಆನ್‌ಲೈನ್‌ ಮೂಲಕ ದಾಖಲಿಸಬೇಕೆಂಬ ಆದೇಶದಂತೆ ಹೆಚ್ಚಿನ ಫಲಾನುಭವಿಗಳು ಅಕ್ಷಯ ಕೇಂದ್ರಗಳಿಗೆ ತೆರಳಿ ದಾಖಲೆಗಳನ್ನು ಕೃಷಿ ಭವನಕ್ಕೆ ಸಲ್ಲಿಸಿದ್ದಾರೆ. ಅಲ್ಲಿ ಇದಕ್ಕೆ 50 ರೂ.ಗಳನ್ನು ಯಾವುದೇ ರಶೀದಿ ನೀಡದೆ ಸೇವಾ ಶುಲ್ಕ ಎಂದು ವಸೂಲಿ ಮಾಡಿದ್ದಾರೆ ಎಂಬ ಆರೋಪವೂ ಇದೆ. ಆದರೆ ಈ ತನಕ ಯೋಜನೆಯಲ್ಲಿ ಹೆಚ್ಚಿನ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಬಂದಿಲ್ಲ. ಕೃಷಿ ಭವನದ ಅಧಿಕಾರಿಗಳು ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾ ಕೃಷಿ ಕಚೇರಿಗೆ ಸಲ್ಲಿಸಬೇಕಾಗಿದೆ. ಅಲ್ಲಿಂದ ಪಟ್ಟಿಯನ್ನು ರಾಜ್ಯ ಸರಕಾರದ ಕೃಷಿ ಇಲಾಖೆ ಕಚೇರಿಗೆ ಸಲ್ಲಿಸ ಬೇಕು. ರಾಜ್ಯ ಕೃಷಿ ಅಧಿಕಾರಿಗಳು ಕೇಂದ್ರ ಕಚೇರಿಗೆ ಮಾಹಿತಿ ದಾಖಲಿಸಿದಲ್ಲಿ ಫಲಾನುಭವಿಗಳ ಖಾತೆಗೆ ಹಣ ಪಾವತಿ ಯಾಗುತ್ತಿದೆ. ಆದರೆ ಇದೀಗ ಜಿಲ್ಲಾ ಕೃಷಿ ಕಚೇರಿಯಿಂದ ಪಟ್ಟಿ ರಾಜ್ಯ ಅಧಿಕಾರಿಗಳಿಗೆ ರವಾನೆಯಾಗದ ಕಾರಣ ಹಣ ಖಾತೆಗೆ ಪಾವತಿಯಾಗಿಲ್ಲ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ರಾಂತಿ ಚಿತ್ರದ 4ನೇ ಹಾಡು ಬಿಡುಗಡೆ ಯಾವಾಗ?

Tue Jan 10 , 2023
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಇದೇ ತಿಂಗಳ ಗಣರಾಜ್ಯೋತ್ಸವದ ಪ್ರಯುಕ್ತ ಕ್ರಾಂತಿ ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದ್ದು ಚಿತ್ರತಂಡ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಮೇಲಿನ ಹೈಪ್ ಹೆಚ್ಚಿಸುವತ್ತ ಚಿತ್ತ ನೆಟ್ಟಿದೆ.ಮೊದಲಿಗೆ ಮೂರು ಹಾಡುಗಳನ್ನು ಬಿಡುಗಡೆ ಮಾಡಿದ್ದ ಕ್ರಾಂತಿ ಚಿತ್ರತಂಡ ಕಳೆದ ಶನಿವಾರವಷ್ಟೇ ( ಜನವರಿ 7 ) ಟ್ರೈಲರ್ ಬಿಡುಗಡೆಗೊಳಿಸಿತ್ತು. ಟ್ರೈಲರ್ ವೀಕ್ಷಿಸಿದ್ದ […]

Advertisement

Wordpress Social Share Plugin powered by Ultimatelysocial