ಮಹಿಳಾ ಸಿಬ್ಬಂದಿಗೆ ಕೀಡಿಗೇಡಿಗಳಿಂದ ಅಪಮಾನ

ಕೊರೋನಾ ದೃಡಪಟ್ಟ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಿದ ಪ್ರದೇಶದಲ್ಲಿ ತಪಾಸಣೆಗೆ ಹೋದ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಗೆ ಕೀಡಿಗೇಡಿಗಳಿಂದ ಅವಮಾನ ಮಾಡಿದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಮೊನ್ನೆ ದಿನ ನಡೆದಿದೆ. ಕೊಣ್ಣೂರ ಪ್ರಾಥಮಿಕ ಕೇಂದ್ರದ ಮಹಿಳಾ ಸಿಬ್ಬಂದಿ ಸೀಲ್ ಡೌನ್ ಪ್ರದೇಶದಲ್ಲಿರುವ ಜನರನ್ನು ತಪಾಸಣೆ ಮಾಡುತ್ತಿರುವ ಸಂದರ್ಭದಲ್ಲಿ ಕೆಲವು ಕೀಡಿಗೇಡಿಗಳು ಮಹಿಳಾ ಸಿಬ್ಬಂದಿಗೆ ನಮಗೂ ನಿಮ್ಮ ತರಹ ಬಟ್ಟೆ ಕೊಟ್ಟರೆ ನಮಗೂ ತಪಾಸಣೆ ಮಾಡಲಿಕ್ಕೆ ಬರುತ್ತದೆ ಅಂತ ಅಪಮಾನ ಮಾಡಿದ್ದಾರೆ.ಇದರಿಂದ ನೊಂದ ಮಹಿಳಾ ಸಿಬ್ಬಂದಿ ಎಲ್ಲರ ನಡುವೆಯೆ ಕಣ್ಣಿರುಡುತ್ತಾ , ನಾಳೆಯಿಂದ ನನ್ನನ್ನು ಬೇರೆ ಕಡೆ ಕೆಲಸಕ್ಕೆ ನಿಯೋಜಿಸಲು ಕಣ್ಣಿರಿಟ್ಟರು,ಸ್ಥಳದಲ್ಲಿದ್ದ ಪುರಸಭೆಯ ಅಧಿಕಾರಿ ಮತ್ತು ಸದಸ್ಯರೊಬ್ಬರು ಕೀಡಿಗೇಡಿಗಳಿಗೆ ತರಾಟೆಗೆ ತೆಗೆದುಕೊಂಡು ಅವರು ನಿಮ್ಮ ಆರೋಗ್ಯ ರಕ್ಷಣೆ ಮಾಡಲಿಕ್ಕೆ ಬಂದಿದ್ದಾರೆ,ಹೀಗೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದರು ಒಟ್ಟಾರೆ ಹೇಳಬೇಕಾದರೆ ಇಲ್ಲಿನ ಸೀಲ್‌ಡೌನ ಪ್ರದೇಶದಲ್ಲಿ ಹೋಳೊರಿಲ್ಲ ಕೇಳೊರಿಲ್ಲ, ಹೆಸರಿಗೆ ಮಾತ್ರ ಸೀಲ್ ಮಾಡಿದ್ದಾರೆನ್ನಲಾಗಿದೆ.ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೋ ಎಂದು ಕಾದು ನೋಡಬೇಕಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕಸುವನಹಳ್ಳಿಯಲ್ಲಿನ ಚಾಮುಂಡೇಶ್ವರಿ ದೇವಸ್ಥಾನ

Tue Jul 14 , 2020
ಬೆಂಗಳೂರಿನ ಕಸುವನಹಳ್ಳಿಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇಂದು ಚಾಮುಂಡೇಶ್ವರಿ ಜನ್ಮ ದಿನವನ್ನು ಆಚರಿಸಲಾಯಿತು. ಪ್ರತಿ ರ‍್ಷ ವಿಜೃಂಭಣೆಯಿಂದ ಈ ದಿನವನ್ನು ಆಚರಣೆ ಮಾಡುತ್ತಿದ್ದರು. ಆದರೆ ಈ ರ‍್ಷ ಕೋವಿಡ್-೧೯ ಸಾಂಕ್ರಾಮಿಕ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮಹೇಶ್ ರವರ ನೇತೃತ್ವದಲ್ಲಿ ಪದ್ದತಿಯನ್ನು ಬಿಡಬಾರದೆಂದು ಸರಳವಾಗಿ ಆಚರಣೆ ಮಾಡಲಾಯಿತು. ಪ್ರತಿ ರ‍್ಷ ಮೈಸೂರು ಚಾಮುಂಡಿ ಬೆಟ್ಟದಲ್ಲೂ ಇದೇ ದಿನ ಜನ್ಮದಿನ ಆಚರಣೆ ಮಾಡುತ್ತಾರೆ. ಇದರ ಪ್ರತೀಕವಾಗಿ ಬೆಂಗಳೂರಿನ ಕಸುವನಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಪ್ರತಿ ರ‍್ಷ […]

Advertisement

Wordpress Social Share Plugin powered by Ultimatelysocial