ಕರ್ತವ್ಯ ನಿರತದಲ್ಲಿದ್ದಾಗ ಕಿಲ್ಲರ್ ಕೊರೊನಾ ಸೋಂಕು ತಗುಲಿ ಮೃತಪಟ್ಟವರಿಗೆ ಪೋಲಿಸ್ ಇಲಾಖೆಯು 30 ಲಕ್ಷ ರೂಪಾಯಿಗಳ ಧನಸಹಾಯವನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಕಲಾಸಿಪಾಳ್ಯ ಠಾಣೆಯ ಹೆಚ್ ಸಿ ಬೇಲೂರಯ್ಯ,ವಿವಿ ಪುರಂ ಠಾಣೆಯ ಎ ಎಸ್ ಐ ಶಿವಣ್ಣ, ಹಾಗೂ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಕಲ್ಕಯ್ಯ ಹಿರೇಮಠ್ ಮೃತಪಟ್ಟ ಪೋಲಿಸ್ ಸಿಬ್ಬಂದಿಗಳು. ಈ ಸಂಧರ್ಭದಲ್ಲಿ ಗೃಹ ಸಚಿವರು ಮತ್ತು ಪೋಲಿಸ್ ಇಲಾಖೆ ಮುಖ್ಯಸ್ಥರಾದ ಡಿಜಿ ಅಂಡ್ ಐಜಿಪಿ ಶ್ರೀ ಪ್ರವೀಣ್ ಸೂದ್ ಮತ್ತು ಪೊಲೀಸ್ ಕಮಿಷನರ್ ಶ್ರೀ ಭಾಸ್ಕರ್ ರಾವ್ ರವರು ಉಪಸ್ಥಿತರಿದ್ದರು. ಹಾಗೆಯೇ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡ್ತಿರೋ ಪೊಲೀಸ್ ಸಿಬ್ಬಂದಿಗಳಿಗೆ ಯಾರೂ ಕೂಡ ದೃತಿಗೆಡಬೇಡಿ ಧೈರ್ಯದಿಂದಿರಿ ಎಂದು ಗೃಹ ಸಚಿವರು ಹೇಳಿದ್ದಾರೆ. ಅಲ್ಲದೇ ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕ ಪೊಲೀಸರು ಯಶ್ವಿಯಾಗಿದ್ದಾರೆ ನಾವು ಯಾವೊಬ್ಬ ಪೊಲೀಸರನ್ನು ಕೂಡ ಬಿಡೋದಿಲ್ಲ ಎಲ್ಲರ ಮೇಲೂ ನಾವು ಜವಾಬ್ದಾರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ