ರಸ್ತೆಯ ಮೇಲೆ ನಿಂತ ಚರಂಡಿ ನೀರಿನಿಂದ ಮನೆಗೆ ತೆರಳಲು ಆಗುತ್ತಿಲ್ಲ

ರಾಯಚೂರು ಜಿಲ್ಲೆ ದೇವದುರ್ಗ  ತಾಲ್ಲೂಕಿನ ಮಂದಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಸೀದಪೂರ ಗ್ರಾಮದಲ್ಲಿ ರಸ್ತೆಯ ಮೇಲೆ ಚರಂಡಿ ನೀರು ನಿಂತು ಮನೆಗಳಿಗೆ ತೆರಳಲು ಆಗುತ್ತಿಲ್ಲ ಈ ಚರಂಡಿ ದುರ್ವಾಸನೆಯಿಂದ ಜನರಿಗೆ ಊಟಸೇರದೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ಮನೆಗಳಿಗೆ ಹೋಗಬೇಕಾದರೆ ಮೈತುಂಬ ಕೆಸರು ಮಾಡಿಕೊಂಡು ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಗ್ರಾಮದ ಜನರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಮನೆಯ ಮುಂದೆ ಚರಂಡಿ ನೀರು ಮತ್ತು ಮಳೆಯ ನೀರು ನಿಂತು ಮನೆಗಳು ತೆವಾಂಶ ಹಿಡಿದಿವೆ ಇದರಿಂದಾಗಿ ಮನೆಗಳು ಬೀಳುವ ಸ್ಥಿತಿಯಲ್ಲಿ ಇವೆ. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸ್ವಚ್ಛ ಭಾರತ ಯೋಜನೆಯಡಿ ಕೋಟ್ಯಾಂತರ ರೂಪಾಯಿ ಅನುದಾನ ನೀಡುತ್ತಿವೆ. ಆದರೆ, ಸಕಾಲಕ್ಕೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪಂಚಾಯ್ತಿ ಮಟ್ಟದಲ್ಲಿ ಎಡವುತ್ತಿರುವ ಅಧಿಕಾರಿಗಳ ಬಗ್ಗೆ ಮೇಲಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು. ಹಾಗೂ ಜನರ ಸಮಸ್ಯೆಗಳಿಗೆ ಸ್ಪಂಧಿಸಿ ಎಂದು ಮಂದಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಸೀದಪೂರ ಗ್ರಾಮಸ್ಥರು ದೂರಿದರು.

Please follow and like us:

Leave a Reply

Your email address will not be published. Required fields are marked *

Next Post

ಭಾರತ ಖರೀದಿಸಿರುವ ರಫೇಲ್ ಫ್ರಾನ್ಸ್ಗಿಂತ ಶಕ್ತಿಶಾಲಿ ಬಿ.ಎಸ್.ಧನೋವಾ

Mon Aug 3 , 2020
ಟಿಬೆಟ್ ಭಾಗದಲ್ಲಿ ಚೀನಾ ಜೊತೆಗೆ ವೈಮಾನಿಕ ಯುದ್ಧ ನಡೆದರೆ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಮೈಲುಗೈ ಸಾಧಿಸಿಕೊಡಲಿದೆ ಎಂದು ವಾಯುಪಡೆಯ ನಿವೃತ್ತ ಮುಖ್ಯಸ್ಥ ಬಿ.ಎಸ್.ಧನೋವಾ ಅಭಿಪ್ರಾಯಪಟ್ಟಿದ್ದಾರೆ. ಬಾಲಾಕೋಟ್ ದಾಳಿಯ ರೂವಾರಿ ಎಂದು ಗುರುತಿಸಿಕೊಂಡಿರುವ ಧನೋವಾ “ ರಫೇಲ್ ಯುದ್ಧ ವಿಮಾನಗಳು ಹಾಗೂ ಎಸ್-೪೦೦ ಕ್ಷಿಪಣಿಗಳು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಇನ್ನಷು ್ಟಹೆಚ್ಚಿಸಲಿದೆ. ಭಾರತದೊಡನೆ ಯುದ್ಧಕ್ಕೆ ಮೊದಲು ಶತ್ರರಾಷ್ಟçಗಳು ಮತ್ತೊಮ್ಮೆ ಯೋಚಿಸಲಿ ಎಂದರು. ಫ್ರಾನ್ಸ್ನಲ್ಲಿ ಇರುವ ರಫೇಲ್ ಯುದ್ಧ ವಿಮಾನಗಳಿಗಿಂತಲೂ ಹೆಚ್ಚಿನ […]

Advertisement

Wordpress Social Share Plugin powered by Ultimatelysocial