ರಾಜ್ಯ ಬಿಜೆಪಿ ಸರ್ಕಾರ ಕ್ಕೆ ಒಂದು ವರ್ಷ

ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದೆ . ಇನ್ನು ಇದರ ಕುರಿತು ಮಾರನಾಡಿರುವ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಿರಂತರ ಸಮಸ್ಯೆ, ಸವಾಲುಗಳು ಎದುರಾದವು. ಆದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರವು ಅವೆಲ್ಲವನ್ನೂ ಸಮರ್ಥವಾಗಿ ಎದುರಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದೆ.ಬಹುಶಃ ಒಂದು ವರ್ಷದ ಆಡಳಿತದಲ್ಲಿ ಇಷ್ಟೊಂದು ಸವಾಲನ್ನು ಎದುರಿಸಿದ ಮತ್ತೂಂದು ರಾಜಕೀಯ ಪಕ್ಷ ಮತ್ತು ಮುಖ್ಯಮಂತ್ರಿಯವರು ಕರ್ನಾಟಕದ ಇತಿ ಹಾಸದಲ್ಲಿ ಇರಲಾರರು. ಜುಲೈ ೨೬ರಂದು ಒಂದು ವರ್ಷ ಪೂರೈಸಿರುವ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರಕಾರದ ಸಾಧನೆಯ ಅವಲೋಕನ ಮಾಡುವ ಮೊದಲು ಪ್ರಕೃತಿ ಮಾತೆಯ ಚರಣಕ್ಕೆ ನಮಿಸಿಯೇ ಪ್ರಾರಂಭಿಸುವುದು ಸೂಕ್ತ ಎಂದು ಭಾವಿಸುತ್ತೇನೆ. ನಾವು ರಾಜಕೀಯ ಪಕ್ಷವಾಗಿ, ಅಧಿಕಾರದ ಚುಕ್ಕಾಣಿ ಹಿಡಿದಾಗ ಸವಾಲುಗಳ ಸರಮಾಲೆಯೇ ನಮ್ಮನ್ನು ದಶ ದಿಕ್ಕುಗಳಿಂದಲೂ ಆವರಿಸುತ್ತದೆ. ಅದನ್ನು ಎದುರಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಿ ನಾಡಿನ ಅಭಿ ವೃದ್ಧಿ ಮಾಡುತ್ತಾ, ನೀಡಿದ ಜವಾಬ್ದಾರಿಯನ್ನು ದಡ ಮುಟ್ಟಿಸುವುದಿದೆಯಲ್ಲ, ಅದು ನಿಜವಾದ ಸಾಧನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ವಿರುದ್ಧ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ತಿರುಗೇಟು

Sun Jul 26 , 2020
ಕಾಂಗ್ರೆಸ್ ನವರು ಸರ್ಕಾರದ ವಿರುದ್ಧ ಸುಳ್ಳು ಸುಳ್ಳು ಆರೋಪಗಳನ್ನು ಮಾಡಿ ಜನರಿಗೆ ದಾರಿ ತಪ್ಪಿಸುವ ಕೆಲಸ  ಮಾಡುತ್ತಿದ್ದಾರೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ತಿರುಗೇಟು ನೀಡಿದ್ದಾರೆ. ನಗರದಲ್ಲಿ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಗಳ ಕುರಿತು ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು, ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಕೋವಿಡ್-19 ಚಿಕಿತ್ಸೆಯಲ್ಲಿ ಗೋಲ್​ಮಾಲ್ ನಡೆದಿದೆ ಎಂಬ ಆರೋಪಕ್ಕೆ […]

Advertisement

Wordpress Social Share Plugin powered by Ultimatelysocial