ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದೆ . ಇನ್ನು ಇದರ ಕುರಿತು ಮಾರನಾಡಿರುವ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಿರಂತರ ಸಮಸ್ಯೆ, ಸವಾಲುಗಳು ಎದುರಾದವು. ಆದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರವು ಅವೆಲ್ಲವನ್ನೂ ಸಮರ್ಥವಾಗಿ ಎದುರಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದೆ.ಬಹುಶಃ ಒಂದು ವರ್ಷದ ಆಡಳಿತದಲ್ಲಿ ಇಷ್ಟೊಂದು ಸವಾಲನ್ನು ಎದುರಿಸಿದ ಮತ್ತೂಂದು ರಾಜಕೀಯ ಪಕ್ಷ ಮತ್ತು ಮುಖ್ಯಮಂತ್ರಿಯವರು ಕರ್ನಾಟಕದ ಇತಿ ಹಾಸದಲ್ಲಿ ಇರಲಾರರು. ಜುಲೈ ೨೬ರಂದು ಒಂದು ವರ್ಷ ಪೂರೈಸಿರುವ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರಕಾರದ ಸಾಧನೆಯ ಅವಲೋಕನ ಮಾಡುವ ಮೊದಲು ಪ್ರಕೃತಿ ಮಾತೆಯ ಚರಣಕ್ಕೆ ನಮಿಸಿಯೇ ಪ್ರಾರಂಭಿಸುವುದು ಸೂಕ್ತ ಎಂದು ಭಾವಿಸುತ್ತೇನೆ. ನಾವು ರಾಜಕೀಯ ಪಕ್ಷವಾಗಿ, ಅಧಿಕಾರದ ಚುಕ್ಕಾಣಿ ಹಿಡಿದಾಗ ಸವಾಲುಗಳ ಸರಮಾಲೆಯೇ ನಮ್ಮನ್ನು ದಶ ದಿಕ್ಕುಗಳಿಂದಲೂ ಆವರಿಸುತ್ತದೆ. ಅದನ್ನು ಎದುರಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಿ ನಾಡಿನ ಅಭಿ ವೃದ್ಧಿ ಮಾಡುತ್ತಾ, ನೀಡಿದ ಜವಾಬ್ದಾರಿಯನ್ನು ದಡ ಮುಟ್ಟಿಸುವುದಿದೆಯಲ್ಲ, ಅದು ನಿಜವಾದ ಸಾಧನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ
ರಾಜ್ಯ ಬಿಜೆಪಿ ಸರ್ಕಾರ ಕ್ಕೆ ಒಂದು ವರ್ಷ
Please follow and like us: