ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಈ ರಾಜ್ಯದ ಚುಕ್ಕ ನೀಡಿದ ಬಿ.ಎಸ್ ಯಡಿಯೂರಪ್ಪನವರು ಯಾವತ್ತು ರೈತರಿಗೆ ಅನ್ಯಾಯ ಎಸಗಿಲ್ಲ ಎಂದು ಬೆಂಗಳೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮತ್ತು ಅರಸೀಕೆರೆ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಮುಖಂಡ ಜಿ. ಮರಿಸ್ವಾಮಿ ಹೇಳಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರ ಕೊಬ್ಬರಿಯನ್ನು ಮ್ಯಾಟ್ ಮೂಲಕ ಖರೀದಿ ಮಾಡುವ ಮುನ್ನ ರಾಜ್ಯ ರ್ಕಾರ ಸಹಾಯಧನ ನೀಡಿಲ್ಲ ಎಂದು ಪ್ರತಿಭಟನೆ ನಡೆಸಿದ ಅರಸೀಕೆರೆ ಕ್ಷೇತ್ರ ಶಾಸಕ ಶಿವಲಿಂಗೇಗೌಡರ ವಿರುದ್ಧ ಕಿಡಿಕಾರಿದರು.
ಸರ್ಕಾರದ ಆದೇಶದಂತೆ ಭಾನುವಾರ ಇಡೀ ರಾಜ್ಯ ಲಾಕ್ ಡೌನ್ ಇದ್ದರು ಶಾಸಕ ಶಿವಲಿಂಗೇಗೌಡ ರ್ಕಾರದ ನಿಯಮವನ್ನು ಗಾಳಿಗೆ ತೂರಿ ವ್ಯವಸಾಯ ಕೃಷಿ ಪತ್ತಿನ ಬ್ಯಾಂಕಿನ ರೈತರಿಗೆ ಚೆಕ್ ವಿತರಣೆ ಸಮಾರಂಭ ಹಾಗೂ ವಿವಿಧ ಕಾಮಗಾರಿಯ ಶಂಕುಸ್ಥಾಪನೆ ಗೆ ಅಡಿಗಲ್ಲು ಹಾಕಿ ಸಾಮಾಜಿಕ ಅಂತರ ಇಲ್ಲದೆ ಇಂತಹ ಕಾಮಗಾರಿಯನ್ನು ಅನುಷ್ಠಾನ ತರಲು ಅವಚುತ್ಯ ಏನಿತ್ತು ಎಂದು ಕಿಡಿಕಾರಿದರು . ಈ ಸಂರ್ಭ ದಲ್ಲಿ ಯಾರು ರ್ಕಾರದ ಅಧಿಕಾರಿಗಳು ಬಾಗವಹಿದ್ದರೊ ಅವರು ಕೂಡ ಶಿಕ್ಷೆ ಗೆ ಓಳ ಪಡಬೇಕಾಗತ್ತದೆ ಎಂದು ಹೇಳಿದರು