ಕೊರೊನಾ ಮಾಹಾಮಾರಿ ವೈರಸ್ ಕಾಟದಿಂದ ವಿದೇಶಗಳಲ್ಲಿ ಸಿಲುಕಿಕೂಂಡಿದ್ದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ವಂದೇ ಮಿಷನ್ ಕೈಕೂಂಡಿತ್ತು. ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಿಂದ ಬರೋಬ್ಬರಿ ೬.೮೭ಲಕ್ಷ ಮಂದಿ ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ನಾಲ್ಕು ಹಂತಗಳಲ್ಲಿ ವಿದೇಶದಲ್ಲಿ ಸಿಲುಕಿಕೂಂಡಿದ್ದವರನ್ನ ವಾಪಸ್ ಕರೆದುಕೂಂಡು ಬರಲಾಗುತ್ತಿದೆ. ಮೊದಲ ಹಂತz ಮೇ ೭ ರಿಂದ ೧೫ರವರೆಗೆ ನಡೆದಿತ್ತು. ಎರಡನೇ ಬಾರಿ ಮೇ ೧೭ ರಿಂದ ೨೨ರವರೆಗೆ,ಹಾಗೂ ಜೂನ್ ೧೧ರಿಂದ ಜುಲೈ೨ ವರೆಗೆ ಮೂರನೇ ಹಂತದಲ್ಲಿ. ಈ ಕಾರ್ಯ ನಾಲ್ಕನೇ ಹಂತದಲ್ಲಿ ಸಾಗಿದೆ. ಈಗ ಈ ಯೋಜನೆ ನೆರವಾಗು ಹೆಚ್ಚುವರಿಯಾಗಿ ೧೨೦ ವಿಮಾನ ಹಾರಿಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ವಂದೇ ಭಾರತ್ ಮಿಷನ್ನಡಿ ೬.೮೧ಲಕ್ಷ ಜನ ತಾಯ್ನಾಡಿಗೆ
Please follow and like us: