ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುರ್ನವಸತಿ ಕೇಂದ್ರ ಹಾಗೂ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 29 ಫಲಾನುಭವಿಗಳಿಗೆ ಇಂಧನ ಚಾಲಿತ ತ್ರಿ-ಚಕ್ರ ವಾಹನ ಹಾಗೂ 15 ಜನರಿಗೆ ಕೃತಕ ಅಂಗಾಂಗಳ ಜೋಡಣೆಯ ಸಲಕರಣೆಗಳನ್ನು ಬಿ.ಎಲ್.ಡಿ.ಇ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ್ ವಿತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ವಿಕಲಚೇತನರಿಗೆ ಜೀವನ ಮಟ್ಟ ಸುಧಾರಣೆಯಾಗವ ದೃಷ್ಟಿಯಿಂದ ಶಾಸಕರ ಅನುದಾನದಿಂದ ಮತಕ್ಷೇತ್ರದಲ್ಲಿ ತ್ರಿ-ಚಕ್ರ ವಾಹನ ವಿತರಿಸಲಾಗುತ್ತಿದೆ. ಶಾಸಕರ ಅನುದಾನದಿಂದ ಕಳೆದ 5 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಆಯ್ಕೆಮಾಡಿ, ತ್ರಿ-ಚಕ್ರ ವಾಹನ ನೀಡಲಾಗುತ್ತಿದೆ. ಫಲಾನುಭವಿಗಳು ತಮ್ಮನ್ನು ಹೊರತುಪಡಿಸಿ ಇನ್ನಿತರ ಬೇರೆ ಯಾವುದೇ ಜನರಿಗೆ ಈ ವಾಹನಗಳನ್ನು ಉಪಯೋಗಕ್ಕೆ ನೀಡದೇ ಸ್ವತಃ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಅಲ್ಲದೇ ಬಿ.ಎಲ್.ಡಿ.ಇ ಆಸ್ಪತ್ರೆಯಿಂದ ನಿರಂತರವಾಗಿ ಅಂಗವಿಕಲರಿಗೆ ಕೃತ ಅಂಗಾಂಗಳನ್ನು ವಿತರಣೆ ಮಾಡಲಾಗುತ್ತಿದ್ದು, ಅಗತ್ಯವಿರುವರು ಇದರ ಪ್ರಯೋಜನ ಪಡೆದುಕೊಳ್ಳಲು ಕೋರಿದರು.
ವಿಕಲಚೇತನರಿಗೆ ಜೀವನ ಮಟ್ಟ ಸುಧಾರಣೆಯಾಗವ ದೃಷ್ಟಿಯಿಂದ ವಿತರಣೆ
Please follow and like us: