ವಿಜಯಪುರ ಜಿಲ್ಲೆ ತಾಳಿಕೋಟೆ ತಾಲ್ಲೂಕಿನ ಮಿಣಜಗಿ ಗ್ರಾಮದಲ್ಲಿ ಅಮಾನವೀಯ ಘಟನೆಯೊದು ನಡೆದಿದೆ. ಜಿಲ್ಲೆಯಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ ಬಸವ ನಾಡಿನಲ್ಲಿ ಮೇಲು ಕೀಳು ಜಾತಿ ತಾರತಮ್ಯ ನಡೆಯುತ್ತಿದೆ. ಬೈಕ್ ಮುಟ್ಟಿದ ಕಾರಣಕ್ಕೆ ಮೈಲಿಗೆ ಮಾಡಿದ್ದಾನೆಂದು ದಲಿತ ಸಮುದಾಯದ ಯುವಕ ಕಾಶೀನಾಥ ತಳವಾರನ ಮೇಲೆ ಸವರ್ಣಿಯರಿಂದ ಹಲ್ಲೆ ನಡೆದಿದೆ. 20 ಕ್ಕೂ ಅಧಿಕ ಸವರ್ಣಿಯರಿಂದ ದಲಿತ ಯುವಕನನ್ನುಪಾದರಕ್ಷೆಗಳಲ್ಲಿ ಹೊಡೆದು ಅಮಾನವೀಯತೆ ಪ್ರದರ್ಶನ ಮಾಡಿದ್ದಾರೆ. ಇದೇ ಮಾರ್ಗವಾಗಿ ತೆರಳುತ್ತಿದ್ದ ಪೊಲೀಸರನ್ನು ಕಂಡು ಹಲ್ಲೆಕೋರರು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಯುವಕ ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಗೆ ದಾಖಲು. ಹಲ್ಲೆಕೋರರ ಬಂಧನಕ್ಕೆ ಜಾಲ ಬೀಸಿದ ಪೊಲೀಸರು ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.
ವಿಜಯಪುರ ಜಿಲ್ಲೆಯಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತ
Please follow and like us: