ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ತಮ್ಮನ್ನು ಗಂಟೆಗಳ ಕಾಲ ಪ್ರಶ್ನಿಸಿದ ಒಂದು ದಿನದ ನಂತರ, ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ‘ಭಯ’ವು ಬಿಜೆಪಿಯ ಅಡಿಪಾಯವನ್ನು ಅಲ್ಲಾಡಿಸಿದೆ ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಗುರುವಾರ ಪ್ರತಿಪಾದಿಸಿದ್ದಾರೆ. ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ತಮ್ಮನ್ನು ಗಂಟೆಗಳ ಕಾಲ ಪ್ರಶ್ನಿಸಿದ ಒಂದು ದಿನದ ನಂತರ, ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ‘ಭಯ’ವು ಬಿಜೆಪಿಯ ಅಡಿಪಾಯವನ್ನು ಅಲ್ಲಾಡಿಸಿದೆ ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಗುರುವಾರ ಪ್ರತಿಪಾದಿಸಿದ್ದಾರೆ.
‘ಬಿಜೆಪಿ ಭಯದಲ್ಲಿದೆ ಮತ್ತು ಎನ್ಡಿಎ ಹೆದರುತ್ತಿದೆ. ಭಯದ ನಡುಕ ಅವರ ಅಡಿಪಾಯವನ್ನು ಅಲ್ಲಾಡಿಸುತ್ತಿರುವ. ಈ ಚಮತ್ಕಾರವನ್ನು ನೋಡಿ! ಇದುವೇ ಇಂಡಿಯಾದ ಶಕ್ತಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ
ಇಂಡಿಯಾ ಮೈತ್ರಿಕೂಟದ ಸಮನ್ವಯ ಸಮಿತಿ ಸಭೆಗೆ ಹಾಜರಾಗುವುದನ್ನು ತಡೆಯಲೆಂದೇ ತನ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದರು ಬುಧವಾರ ಹೇಳಿಕೊಂಡಿದ್ದರು. ಜಾರಿ ನಿರ್ದೇಶನಲಾಯದ ಈ ಕ್ರಮವು ಪ್ರತಿಪಕ್ಷಗಳ ಏಕತೆಯನ್ನು ರೂಪಿಸುವಲ್ಲಿ ಟಿಎಂಸಿ ವಹಿಸುತ್ತಿರುವ ‘ಪ್ರಮುಖ ಪಾತ್ರ’ಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.ಮೊದಲ ಸಮನ್ವಯ ಸಮಿತಿ ಸಭೆ ನಂತರ ಜಾತಿ ಗಣತಿಗೆ ಆಗ್ರಹಿಸಿದ INDIA‘ಜಾರಿ ನಿರ್ದೇಶನಾಲಯ (ಇ.ಡಿ) ತನ್ನ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದೆ. ಆದರೆ, ನಾನು ಅದನ್ನು ದೂಷಿಸುವುದಿಲ್ಲ. ತನಿಖಾ ಸಂಸ್ಥೆಯ ಅಧಿಕಾರಿಗಳು ತಮ್ಮ ರಾಜಕೀಯ ಯಜಮಾನರನ್ನು ಮೆಚ್ಚಿಸಲು ಈ ರೀತಿ ಮಾಡುತ್ತಿದ್ದಾರೆ. ಅವರು ನಿರಂತರವಾಗಿ 72 ಗಂಟೆಗಳ ಕಾಲ ನನ್ನನ್ನು ಪ್ರಶ್ನಿಸಿದರೂ, ನಾನು ನನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ ಏಕೆಂದರೆ ಮುಚ್ಚಿಡಲು ನನ್ನ ಬಳಿ ಏನೂ ಇಲ್ಲ’ ಎಂದು ಬ್ಯಾನರ್ಜಿ ಇಲ್ಲಿ ಸತತ ಒಂಬತ್ತು ಗಂಟೆಗಳ ವಿಚಾರಣೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
Please follow and like us:
Thu Sep 14 , 2023
ನವದೆಹಲಿ: ನೀವು ಜನನ ಪ್ರಮಾಣಪತ್ರವನ್ನು ಹೊಂದಿಲ್ಲದಿದ್ದರೆ ಈಗಲೇ ಪಡೆದುಕೊಳ್ಳಿ. ಅಕ್ಟೋಬರ್ 1 ರಿಂದ ಕಡ್ಡಾಯ ನಿಯಮ ಜಾರಿಗೆ ಬರಲಿದ್ದು, ಇನ್ಮುಂದೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ, ಚಾಲನಾ ಪರವಾನಗಿ, ಮತದಾರರ ಪಟ್ಟಿ ತಯಾರಿ, ಆಧಾರ್ ಸಂಖ್ಯೆ, ವಿವಾಹ ನೋಂದಣಿಗೆ ಜನನ ಪ್ರಮಾಣ ಪತ್ರ ಒಂದೇ ದಾಖಲೆಯಾಗಲಿದೆ. ಸರ್ಕಾರ ಸೆಪ್ಟೆಂಬರ್ 13 ರಂದು ಅಧಿಸೂಚನೆ ಹೊರಡಿಸಿರುವ ಪ್ರಕಾರ ಪ್ರಕಾರ, ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ, 2023 ಅಕ್ಟೋಬರ್ 1 […]