ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿ ಬ್ಯಾಗ್​ನಲ್ಲಿ ಬುಸ್‌..ಬುಸ್‌..!

ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿ ಬ್ಯಾಗ್​ನಲ್ಲಿ ಏಕಾಏಕಿ ನಾಗರಹಾವು ಪ್ರತ್ಯಕ್ಷವಾಗಿರೋ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪ ನಡೆದಿದೆ.

ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಭುವನ್ ಬ್ಯಾಗ್​ನಲ್ಲಿ ಸದ್ದಿಲ್ಲದೇ ನಾಗರಹಾವು ಮಲಗಿಕೊಂಡಿತ್ತು. ಆದರೆ ಇದನ್ನು ಗಮನಿಸದೇ ಎಂದಿನಂತೆ ವಿದ್ಯಾರ್ಥಿ ಶಾಲೆಗೆ ಬ್ಯಾಗ್​​ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ತರಗತಿಗೆ ಬಂದು ಬ್ಯಾಗ್​ನಿಂದ ಪುಸ್ತಕವನ್ನು ಹೊರ ತೆಗೆಯುತ್ತಿದ್ದಂತೆ ಮಲಗಿದ್ದ ಹಾವನ್ನು ಕಂಡು ಗಾಭರಿಗೊಂಡಿದ್ದಾನೆ. ನಂತರ ತನ್ನ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿಗೆ ಬ್ಯಾಗ್​ನಲ್ಲಿದ್ದ ಹಾವನ್ನು ತೋರಿಸಿದ್ದಾನೆ. ಹಾವನ್ನು ನೋಡ ನೋಡುತ್ತಿದ್ದಂತೆ ಆತಂಕಗೊಂಡ ಸ್ನೇಹಿತ ಮಣಿಕಂಠ ಬ್ಯಾಗಿನ ಜಿಪ್ ಎಳೆದು ಹಾವು ಹೊರಬರದಂತೆ ಮಾಡಿದ್ದಾನೆ.

ಕೂಡಲೇ ತಡ ಮಾಡದೇ ವಿದ್ಯಾರ್ಥಿ ಬ್ಯಾಗ್ ಸಮೇತ ಶಿಕ್ಷಕರ ಬಳಿ ಹೋಗಿ ವಿಚಾರ ತಿಳಿಸಿದ್ದಾರೆ. ವಿದ್ಯಾರ್ಥಿಯ ಮಾತಿಗೆ ಆಶ್ಚರ್ಯ ಚಕಿತರಾದ ಶಿಕ್ಷಕರು ಬ್ಯಾಗನ್ನು ಹೊರತಂದು ತೆರೆದು ನೋಡಿದಾಗ ಅದರಲ್ಲಿ ಸದ್ದಿಲ್ಲದೇ ಸುರುಳಿ ಸುತ್ತಿಕೊಂಡ ನಾಗರ ಹಾವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಬ್ಯಾಗ್​ನಲ್ಲಿದ್ದ ವಿಷಪೂರಿತ ನಾಗರಹಾವನ್ನು ಶಿಕ್ಷಕ ಸಮೀಪದ ಕಾಡಿಗೆ ಬಿಟ್ಟು ಬಂದಿದ್ದಾರೆ. ಇನ್ನು ವಿದ್ಯಾರ್ಥಿಯ ಸಮಯ ಪ್ರಜ್ಞೆಗೆ ಗ್ರಾಮಸ್ಥರು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.́

 

 

Please follow and like us:

tmadmin

Leave a Reply

Your email address will not be published. Required fields are marked *

Next Post

ಗೆಳೆಯ ದಚ್ಚು ಬಗ್ಗೆ ಮನ ಬಿಚ್ಚಿ ಮಾತನಾಡಿದ ಅಭಿನಯ ಚಕ್ರವರ್ತಿ ಕಿಚ್ಚ..!

Sat Sep 2 , 2023
ಅಭಿಮಾನಿಗಳ ಪ್ರೀತಿಯ ಕಿಚ್ಚ ಸುದೀಪ್ ಅವರು ಬರ್ತ್​ ಡೇ ಖುಷಿಯಲ್ಲಿರೋ ವೇಳೆಯೇ ತನ್ನ ಕುಚುಕು ಗೆಳೆಯ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಕುರಿತು ಮಾತನಾಡಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಇಬ್ಬರು ದಿಗ್ಗಜ ನಟರ ಬಗ್ಗೆ ಸ್ಯಾಂಡಲ್​ವುಡ್​ನಲ್ಲಿ ಬೇರೆಯದ್ದೇ ಗಾಳಿ ಬೀಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಸಂಸದೆ ಸುಮಲತಾ ಅವರ ಬರ್ತ್​ ಡೇಯಲ್ಲಿ ಇಬ್ಬರು ಸ್ಟಾರ್​ಗಳು ಕೆಲ ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಷ್ಟೆಲ್ಲ ಬೆಳವಣಿಗೆಯ ಮಧ್ಯೆ ಸುದೀಪ್​ ಅವರು ಮತ್ತೆ ಚಾಲೆಂಜಿಂಗ್ […]

Advertisement

Wordpress Social Share Plugin powered by Ultimatelysocial