ಸರ್ಕಾರಕ್ಕೆ ಹೆಚ್.ಡಿ ರೇವಣ್ಣ ಎಚ್ಚರಿಕೆ

ಕೃಷಿ ಭೂಮಿ ಬಗ್ಗೆ ಸರ್ಕಾರ ತಂದಿರುವ ನೀತಿ ಬಗ್ಗೆ ಮಾತನಾಡಿದ ಹೆಚ್.ಡಿ ರೇವಣ್ಣ, ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡಿದರೇಎದುರಿಸುವ ಶಕ್ತಿ ನಮಗಿದೆ, ಸುಮ್ಮನೆ ಕೂತುಕೊಳ್ಳುವ ಜಾಯಮಾನ ನಮ್ಮದಲ್ಲ. ನಾನೇನು ಸುಮ್ಮನೆ ಕೂತಿದ್ದೀನಾ? ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರಾ ? ನಾನು ಬದುಕಿದ್ದಾಗಲೇ ಹಾಸನದಲ್ಲಿ ತೋಟಗಾರಿಕೆ ಕಾಲೇಜು ತಂದೇ ತರುತ್ತೇನೆ ಎಂದು ಹೇಳಿದರು. ​ಅದಲ್ಲದೇ ಸರ್ಕಾರ ರೈತರನ್ನ ಒಕ್ಕಲೆಬ್ಬಿಸುವ ನೀತಿ ಇದಾಗಿದ್ದು, ಸರ್ಕಾರ ಲ್ಯಾಂಡ್ ಮಾಫಿಯಾ ಜೊತೆ ಕೈಜೋಡಿಸಿದೆ. ಇದೆಲ್ಲದರ ಬಗ್ಗೆ ಗಮನ ನೀಡದ ಪ್ರಧಾನಮಂತ್ರಿಗಳು ಕಣ್ಮುಚ್ಚಿ ಕುಳಿತಿದ್ದು, ಈಗ ಬರೀ ಪಾಕಿಸ್ತಾನ ಲಡಾಕ್ ನೋಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು. ​ಹಾಸನ ಜಿಲ್ಲಾ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ ಕರೆಯಿರಿ ಎಂದು ಹೇಳಿದರೇ ಕರೆಯಲು ಮುಂದಾಗುತ್ತಿಲ್ಲ. ಕೆಲ ದಿನಗಳ ನೋಡಿ ನಂತರ 22 ಜನ ಸದಸ್ಯರು ಧರಣಿ ಮಾಡುತ್ತಾರೆ. ಲಾಕ್ ಡೌನ್ ವೇಳೆ ಹೂವಿನ ಬೆಳೆ ನಷ್ಟ ಸೇರಿ ಇತರೆ ಪರಿಹಾರದ ಹಣ ಸರಕಾರದಿಂದ ರೈತರಿಗೆ ಇನ್ನು ಬಂದಿಲ್ಲ. ಹಾಸನ ತಾಲೂಕಿನ ಕೃಷಿ ಕಾಲೇಜನ್ನು ರದ್ದು ಪಡಿಸಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಬಾಯಾರಿದ ಕೋತಿಗೆ ನೀರು ಕುಡಿಸಿದ ವ್ಯಕ್ತಿ

Sat Jun 13 , 2020
ಬಾಯಾರಿದ ಕೋತಿಗೆ  ತಮ್ಮ ಬಳಿ ಇದ್ದ ನೀರನ್ನು ಕುಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೀಗ ಬಾಯಾರಿದ ಕೋತಿಯೊಂದಕ್ಕೆ‌ ವ್ಯಕ್ತಿಯೊಬ್ಬರು ತಮ್ಮ ಬಳಿಯಿರುವ ಮಿನರಲ್ ‌ವಾಟರ್ ಬಾಟಲಿಯಿಂದ ನೀರು ಕುಡಿಸಿದ್ದಾರೆ. ಆರಂಭದಲ್ಲಿ ವ್ಯಕ್ತಿಯ ಬಳಿ ಬರಲು ಅಂಜುತ್ತಿದ್ದ ಕೋತಿ ಹೆದರುತ್ತಲೇ ನೀರು ಕುಡಿದಿದೆ, ಬಳಿಕ ಬಾಯಾರಿಕೆ‌ ಹೋಗುವಷ್ಟು ನೀರು ಕುಡಿದಿದೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದ್ದು, ವ್ಯಕ್ತಿಯ ಕಾರ್ಯಕ್ಕೆ ನೆಟ್ಟಿಗರು ಶಹಬಾಶ್ ಗಿರಿ […]

Advertisement

Wordpress Social Share Plugin powered by Ultimatelysocial