ಆಗಸ್ಟ್ 1ರ ಬಕ್ರೀದ್ ಹಬ್ಬದ ದಿನದಂದು ಬ್ಯಾಚ್ ಪ್ರಕಾರವಾಗಿ 50 ಜನರಂತೆ ಪ್ರಾರ್ಥನೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದಿಂದ ಆದೇಶಹೊರಡಿಸಲಾಗಿದೆ. ಅಲ್ಲದೇ ಮೈದಾನದ ಸಾಮೂಹಿಕ ಪ್ರಾರ್ಥನಗೂ ಬ್ರೇಕ್ ಹಾಕಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ.
ಬದಲಾಗಿ ಬ್ಯಾಚ್ ಪ್ರಕಾರವಾಗಿ ಪ್ರಾರ್ಥನೆ ಸಲ್ಲಿಸಬೇಕು. ಹೀಗಾಗಿ ಬಕ್ರಿದ್ ಹಬ್ಬದ ಸಂದರ್ಭದಲ್ಲಿನ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದೆ.