ಕೊರೋನಾಗೆ ಮೈದಾನ, ಬಯಲು ಪ್ರದೇಶಗಳಲ್ಲಿ ಚಿಕಿತ್ಸೆ ನೀಡೋದಕ್ಕೆ ಮನುಷ್ಯರು ಜಾನುವಾರುಗಳಲ್ಲ ಅನ್ನೋದನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಗುಡುಗಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು, ಯುದ್ದೋಪಾದಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರಿಗೆ ಸರ್ಕಾರದ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ. ಎಲ್ಲಡೆ ಕೋವಿಡ್ ಆಸ್ಪತ್ರೆಗಳು ತುಂಬಿವೆ. ಹೆಚ್ಚಿನ ಬೆಡ್ಗಳ ವ್ಯವಸ್ಥೆ ಮಾಡಲು ಸರ್ಕಾರ ಗಂಭಿರ ಚಿಂತನೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಬಯಲು, ಮೈದಾನ ಬಿಡಿ, ಸ್ಟಾರ್ ಹೋಟೆಲ್ಗಳನ್ನ ವಶಕ್ಕೆ ಪಡೆದು ಕೋವಿಡ್-೧೯ ಕಾಳಜಿ ಕೇಂದ್ರ ಮಾಡಲಿ. ಅಂತ್ಯಕ್ರಿಯೆಗೆ ಜಮೀನು ಸ್ಥಳ ಹುಡುಕುತ್ತೇವೆ ಅಂತಿದ್ದರಲ್ಲಾ ನಾಚಿಕೆಯಾಗಬೇಕು ನಿಮಗೆ. ಶ್ರೀಮಂತರಿಗೆ ಜಮೀನು ಕೊಡಿಸಲು ಸುಗ್ರಿವಾಜ್ಞೆ ಮಾಡುತ್ತೀರಿ. ಜನ ಸಾಮಾನ್ಯರ ಕಾಳಜಿಗೆ ಭೂಮಿ ಹುಡುಕಲು ಹಿಂದೆಟು ಹಾಕುತ್ತೀರಾ? ಕರ್ನಾಟಕ, ಬೆಂಗಳೂರನ್ನು, ನ್ಯೂಯಾರ್ಕ್, ಇಟಲಿ, ಅಮೇರಿಕಾ ಆಗುವುದಕ್ಕೆ ಯಾವತ್ತು ಬಿಡಲ್ಲ ಎಂದು ಹೇಳಿದರು.
ಸರ್ಕಾರದ ವಿರುದ್ಧ ಹೆಚ್.ಕೆ.ಪಾಟೀಲ್ ಗರಂ
Please follow and like us: