ಉಗ್ರರು ದಾಳಿ ನಡೆಸಲು ಸಂಚುರೂಪಿಸಿದ್ದರು 60 ಕೆಜಿ ಸುಧಾರಿತ ಸ್ಪೋಟಕಗಳನ್ನು ತೆಗೆದುಕೊಂಡು ಹೋಗುತ್ತಿದ್ದ ವಾಹನವೊಂದನ್ನು ಭಾರತದ ಭದ್ರತ ಪಡೆ ತಡೆದು ಅಡ್ಡಗಟ್ಟಿದ್ದರು ಆದರೆ ಕಾರಿನಲ್ಲಿ ಇದ್ದ ಉಗ್ರರು ಪರಾರಿಯಾಗಿದ್ದರು. ಈ ಉಗ್ರನನ್ನು ಜಮ್ಮು-ಕಾಶ್ಮೀರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇತನ್ನು ಶೋಪಿಯಾನಾ ಜಿಲ್ಲೆಯ ಹಿದಾಯತ್ ಉಲ್ಲಾಹ್ ಮಲಿಕ್ ಎಂದು ತಿಳಿದು ಬಂದಿದೆ.ಕಳೆದ ವರ್ಷ ಉಗ್ರ ಸಂಘಟನೆಗೆ ಸೇರಿದ ಎಂದು ತಿಳಿದುಬಂದಿದೆ. ಕಳೆದ ವರ್ಷ ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದಂತೆಯೇ ಮತ್ತೊಂದು ದಾಳಿಗೆ ಸಂಚು ರೂಪಿಸಿದ್ದರು. ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಕಾರು ಬಾಂಬ್ ಮೂಲಕ ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯೆ ದಾಳಿ ನಡೆಸಲು ಸಿದ್ದನಾಗಿದ್ದ.ಯೋಧರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದನ್ನು ಕಳೆದ ದಿನ ತಪ್ಪಿಸಿದ್ದರೆ.