ಕೋವಿಡ್-19 ವೈರಸ್ ಪತ್ತೆಯಾದ ಹಿನ್ನೆಲೆ ಬಾದಾಮಿ ತಾಲೂಕಿನ ಡಾಣಕ್ ಶಿರೂರು ಗ್ರಾಮ ಸೀಲ್ ಡೌನ್ ಆಗಿದೆ. ಈ ಹಿನ್ನೆಲೆ ಶಾಸಕ ಸಿದ್ದರಾಮಯ್ಯ ಪಕ್ಷದ ಆಪ್ತರಿಗೆ ದೂರವಾಣಿ ಮೂಲಕ ದಿನನಿತ್ಯದ ವಸ್ತುಗಳನ್ನು ವಿತರಿಸುವಂತೆ ಆದೇಶಿಸಿದ್ದಾರೆ. ಕ್ಷೇತ್ರದಲ್ಲಿ ಅತಿಹೆಚ್ಚು ಸೋಂಕಿತರನ್ನು ಒಳಗೊಂಡ ಡಾಣಕಶಿರೂರ ಗ್ರಾಮದ ಜನರಿಗೆ ತೊಂದರೆ ಆಗಬಾರದು. ಹೀಗಾಗಿ ಸಾರ್ವಜನಿಕರಿಗೆ ಧವಸ ಧಾನ್ಯಗಳ ಕಿಟ್ ಹಂಚಲು ತಿಳಿಸಿದ್ದಾರೆ. ಈ ಬಗ್ಗೆ ಮಾತಾನಡಿದ ಕಾಂಗ್ರೆಸ್ ಕಾರ್ಯಕರ್ತ ಹೊಳೆಬಸು ಶೆಟ್ಟರ್ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಧವಸಧಾನ್ಯಗಳನ್ನು ಹಂಚುತ್ತಿದ್ದೇವೆ. ಕೋವಿಡ್ -19 ಕೇಸ್ ಪತ್ತೆ ಹಿನ್ನೆಲೆ ಸೀಲ್ಡೌನ್ ಆಗಿರುವ ಡಾಣಕಶಿರೂರ ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗಿರುವುದರಿಂದ ಗ್ರಾಮದ 300 ಕುಟುಂಬದವರಿಗೆ 2 ಕೆಜಿ ಗೋಧಿ ಹಿಟ್ಟು, 1 ಕೆಜಿ ರವೆ, 1 ಕೆಜಿ ಸಕ್ಕರೆ, ಅರ್ದ ಕೆಜಿ ಬೇಳೆ ,ಅರ್ದ ಕೆಜಿ ಅಡುಗೆ ಎಣ್ಣೆ, 100 ಗ್ರಾಂ ಚಹಾಪುಡಿ, 4 ಕೆಜಿ ಇರುಳ್ಳಿ ಯ ಕಿಟ್ ನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ನಮ್ಮ ಪಕ್ಷದ ಮುಖಂಡರು ಸೇರಿಕೊಂಡು ಇಂದು ಬಾದಾಮಿಯ ತಹಶೀಲ್ದಾರ ಸುಹಾಸ ಇಂಗಳೆ ರವರಿಗೆ ದಿನಸಿ ಕಿಟ್ ಗಳನ್ನು ಹಸ್ತಾಂತರ ಮಾಡಿದ್ದೇವೆ ಎಂದು ಹೇಳಿದ್ರು.
ಸಿದ್ದರಾಮಯ್ಯ ಬಳಗದಿಂದ ಸೀಲ್ಡ್ ಡೌನ್ ಏರಿಯಾದಲ್ಲಿ ದಿನಸಿ ವಿತರಣೆ..!
Please follow and like us: