ಮೈಸೂರಿನ ಆರ್.ಆರ್.ಗ್ರೂಪ್ಸ್ ಪ್ರತಿವರ್ಷ ಏರ್ಪಡಿಸುವ ಸೌಂದರ್ಯ ಸ್ಪರ್ಧೆಯಲ್ಲಿ ಈ ವರ್ಷದ ಮಿಸೆಸ್ ಕರ್ನಾಟಕ -2020 ಕಿರೀಟವನ್ನು ಸುಳ್ಯದ ಸುಪ್ರೀತ ಕೆ.ಎಸ್ ಅವರು ಗೆದ್ದುಕೊಂಡಿದ್ದಾರೆ. ಜು.11 ರಂದು ಮೈಸೂರಿನ ಕಂಟ್ರಿ ಇನ್ ಹೋಟೆಲ್ ನ ಸಭಾಂಗಣದಲ್ಲಿ ಸ್ಪರ್ಧೆ ನಡೆದಿದ್ದು, ಗೆದ್ದ ಸುಪ್ರೀತಾರವರಿಗೆ ಆರ್.ಆರ್.ಗ್ರೂಪ್ಸ್ನ ಎಂ.ಡಿ ರಾಜೇಶ್ ಸಿದ್ಧಮಲ್ಲಪ್ಪವಂಶ ಕಿರೀಟ ತೊಡಿಸಿ, ಕಪ್ ನೀಡಿ ಗೌರವಿಸಿದರು.ಮಿಸೆಸ್ ಕರ್ನಾಟಕ ಆಗಿ ಆಯ್ಕೆಯಾಗಿರುವ ಸುಪ್ರೀತಾರವರು ಸುಳ್ಯ ಬೀರಮಂಗಲ ನಿವಾಸಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಅಜಿತ್ ಬಿ.ಟಿ. ಯವರ ಪತ್ನಿ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಸೂರ್ಯಕಲಾ ತ್ರಿವಿಕ್ರಮ ರವರ ಸೊಸೆ.ಇವರು ವಿಜಯಾ ಬ್ಯಾಂಕ್ ಅಲ್ಲಿ ಕೆಲಸ ಮಾಡುತ್ತಿದ್ದು, ಚಿತ್ರಕಲೆ, ಸಂಗೀತ, ಯೋಗ, ಅಕ್ವೇರಿಯಂ, ಕರಕುಶಲತೆ, ಗಾರ್ಡನಿಂಗ್ ಹವ್ಯಾಸ ಹೊಂದಿರುತ್ತಾರೆ.ಹಾಗು ಇವರು 2008 ರಲ್ಲಿ ಬಿ.ಬಿ.ಎಂ. ಪದವಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರು.8 ವರ್ಷದ ಪುತ್ರ ಇಶಾನ್ ತಾಯಿಯಾಗಿರುವ ಸುಪ್ರೀತಾ ಈಗ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ.
ಸುಳ್ಯದ ಬ್ಯಾಂಕ್ ಉದ್ಯೋಗಿ ಈಗ ಮಿಸೆಸ್ ಕರ್ನಾಟಕ
Please follow and like us: