ಕೋವಿಡ್ ಮಹಾಮಾರಿ ಹಾಲು ಉತ್ಪಾದಕರ ಬದುಕಿನ ಮೇಲೂ ಪರಿಣಾಮ ಬೀರಿದೆ. ಸರಕಾರವು ಹಾಲು ಉತ್ಪಾದಕರಿಗೆ ಕಳೆದ ಮೂರು ತಿಂಗಳಿAದ ಪ್ರೋತ್ಸಾಹಧನ ನೀಡಿಲ್ಲ. ಜತೆಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹಾಲು ಖರೀದಿ ದರವನ್ನು ಇತ್ತೀಚೆಗೆ ೧ ರೂಪಾಯಿಷ್ಟು ಇಳಿಸಿದೆ. ಇದು ಹಾಲು ಉತ್ಪಾದಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಜಿಲ್ಲೆಯಲ್ಲಿ ಹಲವು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಮಂದಿಗೆ ಅದುವೇ ಜೀವನಾಧಾರ. ಜಾನುವಾರುಗಳ ಆಹಾರ ಪದಾರ್ಥಗಳಾದ ಬೂಸಾ, ಹಿಂಡಿ, ಹೊಟ್ಟು, ಮೇವಿನ ದರ ಹೆಚ್ಚಾಗಿರುವ ಕಾರಣ ಹಸುಗಳ ಸಾಕಣೆ ಕಷ್ಟವಾಗಿರುವಾಗ ಮತ್ತು ಕೊರೊನಾ ಸಂಕಷ್ಟ ಕಾಲದಲ್ಲಿ ಹಾಲಿನ ದರವನ್ನು ಕಡಿಮೆ ಮಾಡಿ ರುವುದರಿಂದ ಹೈನುಗಾರರು ಆತಂಕಗೊAಡಿದ್ದಾರೆ.