ಭಾರೀ ಗಾತ್ರದ ಕ್ರೇನ್ ಒಂದು ವಿಶಾಖಪಟ್ಟಣಂನ ಹಿಂದೂಸ್ಥಾನ್ ಶಿಫ್ ಯರ್ಡ್ ನಲ್ಲಿ ಕಾಮಗಾರಿ ನಡೆಸುತ್ತಿರುವ ವೇಳೆಯಲ್ಲಿ ಕುಸಿದು ಬಿದ್ದಿದೆ. ಇದರ ಪರಿಣಾಮ, ಕಾಮಗಾರಿಯಲ್ಲಿ ತೊಡಗಿದ್ದಂತ ೧೦ ಕರ್ಮಿಕರು ಸ್ಥಳದಲ್ಲಿಯೇ ಸಾನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ. ಈ ಕುರಿತಂತೆ ವಿಶಾಖಪಟ್ಟಣಂ ಡಿಸಿಪಿ ಸುರೇಶ್ ಬಾಬು ಸ್ಪಷ್ಟ ಪಡಿಸಿದ್ದರು. ತಕ್ಷಣವೇ ಸ್ಥಳಕ್ಕೆದಾವಿಸಿದ ಪೊಲೀಸರು, ರಕ್ಷಣಾ ತಂಡದ ಸದಸ್ಯರು, ಕ್ರೇನ್ ಅಡಿಯಲ್ಲಿ ಸಿಲುಕಿರುವಂತ ಕರ್ಮಿಕರ ರಕ್ಷಣಾ ಕರ್ಯದಲ್ಲಿ ತೊಡಗಿದ್ದಾರೆ.
ಈ ದುರಂತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಡಿಸಿಪಿ ಸುರೇಶ್ ಬಾಬು ಅವರು ತನಿಖೆ ನಡೆಸವುದಾಗಿ ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.