ಸೂಕ್ಷ್ಮ ಜಿದ್ದಾಜಿದ್ದಿನ ಕ್ಷೇತ್ರವಾದ ಸುರಪುರ ವಿಧಾನಸಭಾ ಕ್ಷೇತ್ರದಿಂದ ನರಸಿಂಹ ನಾಯಕ ರಾಜುಗೌಡ ರವರು ಮತ್ತೊಮ್ಮೆ ೪ನೆಯ ಬಾರಿಗೆ ಶಾಸಕರಾಗಲೆಂದು ಸುಮಾರು ೧೬ ಕಿಲೋಮೀಟರ್ ವರೆಗೆ ದೀರ್ಘ ದಂಡ ನಮಸ್ಕಾರ ಹಾಕುವ ಮೂಲಕ ಇಬ್ಬರು ಯುವಕರು ಅಭಿಮಾನ ಮೆರೆದಿದ್ದಾರೆ.
ಸುರಪುರ ತಾಲೂಕಿನ ಕರ್ನಾಳ ಗ್ರಾಮದ ಯುವಕ ಮಲ್ಲನಗೌಡ ಪೊಲೀಸ್ ಪಾಟೀಲ್ ಹಾಗೂ ಭೀಮಣ್ಣ ನಾಗುಂಡಿ ಎನ್ನುವ ಇಬ್ಬರು ಯುವಕರು ಸುಡುವ ಬಿಸಿಲಿನಲ್ಲಿ ಸುಮಾರು 16 ಕಿಲೋಮೀಟರ್ ವರೆಗೆ ದೀಡ ನಮಸ್ಕಾರ ನಮಸ್ಕಾರ ಹಾಕಿದ್ದಾರೆ.
ಮಾಧ್ಯಮದವರೊಂದಿಗೆ ಮಾತಾಡಿದವರು ಅವರು ರಾಜುಗೌಡ್ರು ತಾಲೂಕಿನಾದ್ಯಂತ ಉತ್ತಮ ಅಭಿವೃದ್ಧಿ ಮಾಡಿದ್ದಾರೆ, ಅವರ ಜನಪರ ಕೆಲಸಗಳು ನಮಗೆ ಸ್ಪೂರ್ತಿ ನೀಡಿವೆ. ಹಾಗಾಗಿ ಶಾಸಕ ರಾಜುಗೌಡರು ನಾಲ್ಕನೇ ಬಾರಿಗೆ ಮತ್ತೊಮ್ಮೆ ಸುರಪುರ ಕ್ಷೇತ್ರದ ಶಾಸಕರಾಗಲೆಂದು ಸುರಪುರದ ನಗರದ ಆರಾಧ್ಯ ದೇವರಾದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದವರೆಗೆ ಸುಮಾರು 16 ಕಿಲೋಮೀಟರ್ ವರೆಗೆ ನಾವು ಅಭಿಮಾನದಿಂದ ದೀರ್ಘದಂಡ ನಮಸ್ಕಾರವನ್ನು ಹಾಕುತ್ತಿದ್ದೇವೆ ಎಂದು ಹೇಳಿದರು.
https://play.google.com/store/apps/details?id=com.speed.newskannada