ಚುನಾವಣಾ ಅಕ್ರಮ ರಾಜ್ಯಾದ್ಯಂತ ಈವರೆಗೆ 174 ಕೋಟಿ ರೂ. ನಗದು, ವಸ್ತುಗಳು ಜಪ್ತಿ!

ಬೆಂಗಳೂರು : ಚುನಾವಣಾ ಅಕ್ರಮದ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿಯಾದ ಬಳಿಕ ರಾಜ್ಯಾದ್ಯಂತ ಈವರೆಗೆ 72 ಕೋಟಿ ರೂ. ನಗದು ಸೇರಿ ಮದ್ಯ, ಮಾದಕ ದ್ರವ್ಯ, ಚಿನ್ನಾಭರಣ ಸೇರಿದಂತೆ ಒಟ್ಟು 174 ಕೋಟಿ ರೂ. ಮೌಲ್ಯದ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದೆ.

ನೀತಿ ಸಂಹಿತೆ ಜಾರಿಯಾದ ನಂತರ ರಾಜ್ಯದಲ್ಲಿ ಸ್ಥಿರ ಕಣ್ಗಾವಲು ತಂಡ, ಜಾಗೃತ ದಳ, ಪೊಲೀಸ್ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಸೂಕ್ತ ದಾಖಲೆ ಇಲ್ಲದ 71.93 ಕೋಟಿ ರೂ. ನಗದು ಹಾಗೂ 18.87 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಜಪ್ತಿ ಮಾಡಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ 38.74 ಕೋಟಿ ರೂ. ಮೌಲ್ಯದ 9.23 ಲಕ್ಷ ಲೀಟರ್ ಮದ್ಯ, 15 ಕೋಟಿ ರೂ. ಮೌಲ್ಯದ 820 ಕಿ.ಲೋಓ ಗಾಂಜಾ, ಅಫೀಮು, ಮತ್ತಿತ್ತರ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. 26.63 ಕೋಟಿ ರೂ. ಮೌಲ್ಯದ 62 ಕಿ.ಲೋ ಚಿನ್ನ, 2.79 ಕೋಟಿ ರೂ. ಮೌಲ್ಯದ 401 ಕಿ. ಲೋ ಬೆಳ್ಳಿ ಸೇರಿ 29.43 ಕೋಟಿ ರೂ. ಬೆಲೆ ಬಾಳುವ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮದ್ವೆ ವಿಚಾರ ಮುಚ್ಚಿಟ್ಟಿದ್ಯಾಕೆ? ದಿಢೀರ್ ಫೋಟೋ ಬಂದಿದ್ದೇಗೆ?

Tue Apr 18 , 2023
ನಟ ವಿನೋದ್‌ ರಾಜ್ ಫ್ಯಾಮಿಲಿ ಫೋಟೊವೊಂದು ಭಾರೀ ಸದ್ದು ಮಾಡ್ತಿದೆ. ನಿರ್ದೇಶಕ ಪ್ರಕಾಶ್ ರಾಜ್ ಮೇಹು ಈ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದರು. ವಿನೋದ್ ರಾಜ್‌ ಅವರಿಗೆ ಮದ್ವೆ ಆಗಿ ಮಗ ಇದ್ದಾನೆ. ಅದಕ್ಕೆ ಈ ಫೋಟೊ, ಮಗನ ಮಾರ್ಕ್ಸ್ ಕಾರ್ಡ್‌ ಸಾಕ್ಷಿ ಎಂದಿದ್ದರು. ಈ ಫೋಟೊ ಬಗ್ಗೆ ವಿನೋದ್ ರಾಜ್ ಈಗ ಮಾತನಾಡಿದ್ದಾರೆ. ಪ್ರಕಾಶ್ ರಾಜು ಮೇಹ ಅವರ ಪ್ರಶ್ನೆಗೆ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ […]

Advertisement

Wordpress Social Share Plugin powered by Ultimatelysocial