ಬಸವಕಲ್ಯಾಣ ಮತಕ್ಷೇತ್ರದಲ್ಲಿ ರಂಗೆರಿದ ಚುನಾವಣಾ ಕಾವೇರಿದೆ..
ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳ ಮಧ್ಯ ಭಾರಿ ಪೈಪೊಟಿ ನಡೆಯುತ್ತಿದ್ಧು ,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಬಿ.ಜೆ.ಪಿ (BJP) ಅಭ್ಯರ್ಥಿ ಶರಣು ಸಲಗರ್ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಅಭ್ಯರ್ಥಿ ವಿಜಯಸಿಂಗ್.
ಇಲ್ಲಿನ ಹಾಲಿ ಬಿ.ಜೆ.ಪಿ (BJP) ಶಾಸಕ ಹಾಗೂ ಚುನಾವಣಾ ಅಭ್ಯರ್ಥಿ ಶರಣು ಸಲಗರ್ಗೆ ತಿರುಗೆಟು ನೀಡಿದ ಮಾಜಿ ಎಂಎಲ್ಸಿ ಹಾಗು ಕಾಂಗ್ರೆಸ್ ಅಭ್ಯರ್ಥಿಯಾದ ವಿಜಯ್ ಸಿಂಗ್, ಮಾಜಿ ಸಿಎಂ ದಿವಂಗತ ಧರ್ಮಸಿಂಗ್ ಅವರಿಗೆ ಈ ಹಿಂದೆ ಸೊಲಿಸಿದ ಜಾಗವಿದು ಅವರ ಮಗ ವಿಜಯಸಿಂಗ್ ಅವರಿಗೆ ಸೊಲಿಸುವುದು ದೊಡ್ಡ ವಿಷಯವೆನಲ್ಲ. ಎನ್ನುವ ಮಾತಿಗೆ ತಿರುಗೇಟು ನೀಡಿದ ವಿಜಯಸಿಂಗ್ ಶರಣು ಸಲಗರ್ ಅವರಿಗೆ ಈಗಾಗಲೇ ಸೊಲುವ ಭಯ ಹುಟ್ಟಿದೆ ಹಾಗಾಗಿ ಹತಾಶೆಯಲ್ಲಿ ಮಾತನಾಡುತ್ತಿದ್ದಾರೆ.
ಶರಣು ಸಲಗರ್ ಅವರಿಗೆ ಕಲ್ಬುರ್ಗಿ ಜನರನ್ನು ಗಡಿಪಾರು ಮಾಡಿದ್ದಾರೆ ಹಾಗಾಗಿ ಅವರು ಬಸವಕಲ್ಯಾಣಕ್ಕೆ ಬಂದು ನಿಂತಿದ್ಧಾರೆ. ಬಸವಕಲ್ಯಾಣದ ಜನತೆಯು ಸಹ ಅವರನ್ನು ಸೊಲಿಸಿ ಇಲ್ಲಿಂದ ಗಡಿಪಾರು ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ವಿಜಯ್ ಸಿಂಗ್ ಆಡಿಕೊಂಡಿದ್ದಾರೆ.
ಶರಣು ಸಲಗರ್ ಚುನಾವಣೆಗೆ ನಿಲ್ಲುವ ಬದಲು ಯಾವುದಾದರು ನಾಟಕ ಕಂಪನಿಗೆ ಸೆರಿಕೊಳ್ಳಬೇಕಾಗಿತ್ತು. ನಾಟಕ ಮಾಡಿ ನಾನು ಬಡವ ಎಂದು ಹೇಳಿಕೊಂಡು ಜನರಿಂದ ಅನುಕಂಪವನ್ನು ಗಿಟ್ಟಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ, ಆದರೆ ಜನ ಅವರಿಗೆ ತಕ್ಕ ಪಾಠ ಕಲಿಸಲಿತ್ತಾರೆ ಎಂದು ತಿಳಿಸುತ್ತಾನೆ.
https://play.google.com/store/apps/details?id=com.speed.newskannada