ತೆಲಂಗಾಣ: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗಾಗಿ ಡ್ರೆಸ್ ಮಾಡುತ್ತಾರೆ ಹಾಗೂ ಅವರ ನೇತೃತ್ವದ ಸರಕಾರಕ್ಕೆ ರೈತರು ಮತ್ತು ಬಡವರ ಬಗ್ಗೆ ಗೌರವವಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ವಾಗ್ದಾಳಿ ನಡೆಸಿದರು.ಕೇಂದ್ರದ ಬಜೆಟ್ ಅನ್ನು “ಭಯಾನಕ ಹಾಗೂ ಗೋಲ್ಮಾಲ್” ಎಂದು ಕರೆದ ಕೆಸಿಆರ್ “ಉಪರ್ ಶೇರ್ವಾಣಿ, ಅಂದರ್ ಪರೇಶಾನಿ” ಎಂದು “ಗುಜರಾತ್ ಮಾದರಿ” ಅನ್ನು ವ್ಯಂಗ್ಯವಾಡಿದರು.ಸೋಷಿಯಲ್ ಮೀಡಿಯಾ ಮ್ಯಾನೇಜ್ ಮೆಂಟ್ ಮತ್ತೆ ಮತ್ತೆ ಸುಳ್ಳನ್ನು ಹೇಳುತ್ತಾ, ಜನರನ್ನು ಈ ತನಕ ಮೂರ್ಖರನ್ನಾಗಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈಗ ಅವರ ಬಣ್ಣ ಬಯಲಾಗಿದೆ. ಬಿಜೆಪಿಯವರು ದ್ವೇಷ ಮತ್ತು ವಿಭಜನೆಯ ಕೋಮು ರಾಜಕೀಯವನ್ನು ಆಡುತ್ತಿದ್ದಾರೆ” ಎಂದು ಕೆಸಿಆರ್ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada