ಹಿಜಾಬ್​ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲ, ಇದು ಸಂವಿಧಾನಕ್ಕೆ ವಿರೋಧ ಎಂದು ಪ್ರತಿಭಟಿಸಿ ಉಪನ್ಯಾಸಕಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ

ತುಮಕೂರು: ಹಿಜಾಬ್​ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲ, ಇದು ಸಂವಿಧಾನಕ್ಕೆ ವಿರೋಧ ಎಂದು ಪ್ರತಿಭಟಿಸಿ ಉಪನ್ಯಾಸಕಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.ನಗರದ ಜೈನ್​ ಪಿಯು ಕಾಲೇಜಿನ ಇಂಗ್ಲಿಷ್​ ಉಪನ್ಯಾಸಕಿ ಚಾಂದಿನಿ ಹಿಜಾಬ್​ ಧರಿಸಲು ಅವಕಾಶ ನೀಡದಿರುವುದನ್ನು ಖಂಡಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಹಿಂದಿನಿಂದಲೂ ಹಿಜಾಬ್​ ಧರಿಸಿಯೇ ಕಾಲೇಜಿಗೆ ಚಾಂದಿನಿ ಹಾಜರಾಗುತ್ತಿದ್ದರು. ಇತ್ತೀಚೆಗೆ ಹಿಜಾಬ್​-ಕೇಸರಿಶಾಲು ವಿವಾದ ತಾರಕ್ಕೇರಿದ ನಂತರ ಹಿಜಾಬ್​ ಧರಿಸಿ ಕಾಲೇಜಿಗೆ ಹಾಜರಾಗದಂತೆ ಆಡಳಿತ ಮಂಡಳಿ ಸೂಚಿಸಿತ್ತು.ಜೈನ್ ಪಿಯು ಕಾಲೇಜು, ವಿದ್ಯಾವಾಹಿನಿ ಕಾಲೇಜು ಸೇರಿದಂತೆ ತುಮಕೂರು ನಗರದ ಹಲವು ಕಡೆ ಚಾಂದಿನಿ ಅಥಿತಿ ಉಪನ್ಯಾಸಕಿಯಾಗಿ ಕೆಸಲ ಮಾಡುತ್ತಿದ್ದರು. ಗುರುವಾರ ಜೈನ್ ಪಿಯು ಕಾಲೇಜಿಗೆ ರಾಜೀನಾಮೆ ಕೊಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಂಭ ರಾಶಿ

Fri Feb 18 , 2022
ಕುಂಭ ರಾಶಿ ನಾಳೆಯ ರಾಶಿ ಭವಿಷ್ಯ ಗುರುವಾರ, ಫೆಬ್ರವರಿ 18, 2022 ನಿಮ್ಮ ತೂಕದ ಮೇಲೆ ನಿಗಾ ಇರಿಸಿ ಮತ್ತು ಅತಿಯಾಗಿ ತಿನ್ನುವುದರಲ್ಲಿ ತೊಡಗಬೇಡಿ. ನಿಮ್ಮನ್ನು ಆಕರ್ಷಿಸುತ್ತಿರುವಂತೆ ತೋರುವ ಹೂಡಿಕೆ ಯೋಜನೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮೇಲ್ಮೈ ಕೆಳಗೆ ಆಳವಾಗಿ ಅಗೆಯಿರಿ- ಯಾವುದೇ ಬದ್ಧತೆಯನ್ನು ಮಾಡುವ ಮೊದಲು ನಿಮ್ಮ ತಜ್ಞರನ್ನು ಸಂಪರ್ಕಿಸಿ.ಶ್ರೀ ಮೂಕಾಂಬಿಕಾ ಜೋತಿಷ್ಯ ಪೀಠಂ ಖ್ಯಾತ ಜೋತಿಷ್ಯ ರತ್ನ ಪಂಡಿತ್ ಶ್ರೀ ಸಿದ್ಧಾಂತ್ ಅರುಣ್ ಶರ್ಮಾ ಗುರುಜಿ 30 […]

Advertisement

Wordpress Social Share Plugin powered by Ultimatelysocial