ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಪಂಪಣ್ಣ 16 ವರ್ಷ ಸೈನಿಕರಿಗೆ ತರಬೇತಿ ನೀಡಿ ಮರಳಿ ದೇವದುರ್ಗಕ್ಕೆ ಬಂದಿರುವ ಹೆಮ್ಮೆಯ ಸೈನಿಕ. ದೇವದುರ್ಗದ ಸರ್ಕಾರಿ ಕ್ರೀಡಾಂಗಣದಲ್ಲಿ ಯುವಕರಿಗೆ ಪಂಪಣ್ಣರವರು ಉಚಿತ ಸೈನಿಕ ತರಬೇತಿ ನೀಡುತ್ತಿದ್ದಾರೆ. ನೂರಾರು ಚಟಗಳ ದುರಭ್ಯಾಸದಿಂದ ಹಾಳಾಗುತ್ತಿರುವ ಇಂದಿನ ಯುವಕರಿಗೆ ತಮ್ಮ ದೇಹ ಮತ್ತು ದೇಶದ ರಕ್ಷಕರಾಗುವಂತೆ ಹುರಿದುಂಬಿಸಿ ಸೈನಿಕ ತರಬೇತಿ ನೀಡುತ್ತಿದ್ದಾರೆ. ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿರುವ ನಮ್ಮ ಭಾರತ ದೇಶದ ಯುವಕರನ್ನು ಮಾನಸಿಕವಾಗಿ ದೈಹಿಕವಾಗಿ ಸದೃಢರನ್ನಾಗಿ ಮಾಡಲು ನಾವೆಲ್ಲಾ ಕೈಜೋಡಿಸ ಬೇಕು ಎಂದು ಯುವಕರಿಗೆ ತಿಳಿಸಿದರು. ಪ್ರತಿದಿನ ಮುಂಜಾನೆ 6 ಗಂಟೆಗೆ ಕೊಪ್ಪರ ರಸ್ತೆಯಲ್ಲಿರುವ ಕ್ರೀಡಾಂಗಣದಲ್ಲಿ ಯುವಕರಿಗೆ ನಿಸ್ವಾರ್ಥ ತರಬೇತಿ ನೀಡುತ್ತಿದ್ದಾರೆ.