ರಾಯಚೂರು ಜಿಲ್ಲೆಯ  ದೇವದುರ್ಗ ತಾಲ್ಲೂಕಿನ ಪಂಪಣ್ಣ

ರಾಯಚೂರು ಜಿಲ್ಲೆಯ  ದೇವದುರ್ಗ ತಾಲ್ಲೂಕಿನ ಪಂಪಣ್ಣ 16 ವರ್ಷ ಸೈನಿಕರಿಗೆ ತರಬೇತಿ ನೀಡಿ ಮರಳಿ ದೇವದುರ್ಗಕ್ಕೆ ಬಂದಿರುವ  ಹೆಮ್ಮೆಯ ಸೈನಿಕ. ದೇವದುರ್ಗದ ಸರ್ಕಾರಿ ಕ್ರೀಡಾಂಗಣದಲ್ಲಿ ಯುವಕರಿಗೆ ಪಂಪಣ್ಣರವರು ಉಚಿತ ಸೈನಿಕ  ತರಬೇತಿ ನೀಡುತ್ತಿದ್ದಾರೆ. ನೂರಾರು ಚಟಗಳ ದುರಭ್ಯಾಸದಿಂದ ಹಾಳಾಗುತ್ತಿರುವ ಇಂದಿನ ಯುವಕರಿಗೆ  ತಮ್ಮ ದೇಹ ಮತ್ತು ದೇಶದ ರಕ್ಷಕರಾಗುವಂತೆ ಹುರಿದುಂಬಿಸಿ ಸೈನಿಕ ತರಬೇತಿ ನೀಡುತ್ತಿದ್ದಾರೆ. ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿರುವ ನಮ್ಮ ಭಾರತ ದೇಶದ ಯುವಕರನ್ನು ಮಾನಸಿಕವಾಗಿ ದೈಹಿಕವಾಗಿ ಸದೃಢರನ್ನಾಗಿ ಮಾಡಲು ನಾವೆಲ್ಲಾ ಕೈಜೋಡಿಸ ಬೇಕು ಎಂದು ಯುವಕರಿಗೆ ತಿಳಿಸಿದರು. ಪ್ರತಿದಿನ ಮುಂಜಾನೆ 6 ಗಂಟೆಗೆ ಕೊಪ್ಪರ ರಸ್ತೆಯಲ್ಲಿರುವ ಕ್ರೀಡಾಂಗಣದಲ್ಲಿ ಯುವಕರಿಗೆ ನಿಸ್ವಾರ್ಥ ತರಬೇತಿ ನೀಡುತ್ತಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಭಾರಿ ಮಟ್ಟದಲ್ಲಿ ಡೌನ್‌ಲೋಡ್ ಆದ ‘ಆರೋಗ್ಯ ಸೇತು’..!

Fri Jul 17 , 2020
ಜಗತ್ತಿನಲ್ಲಿ ಅತೀ ಹೆಚ್ಚು ಡೌನ್ ಲೋಡ್ ಕಂಡ ಕೋವಿಡ್ ೧೯ ಟ್ರ‍್ಯಾಕಿಂಗ್ ಆ್ಯಪ್ ಗಳಲ್ಲಿ ಆರೋಗ್ಯ ಸೇತು ಮೊದಲ ಸ್ಥಾನ ಪಡೆದುಕೊಂಡಿದೆ. ಸೆನ್ಸಾರ್ ಟವರ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು ಏಪ್ರೀಲ್ ನಲ್ಲಿ ಆರೋಗ್ಯ ಸೇತು ಸರಿಸುಮಾರು ೮೦.೮ ಮಿಲಿಯನ್ ಡೌನ್ ಕಂಡಿತ್ತು. ಆದರೇ ಜುಲೈ ವೇಳೆಗೆ ಗೂಗಲ್ ಮತ್ತು ಆ್ಯಪ್ ಸ್ಟೋರ್ ಗಳಿಂದ ೧೨೭.೬ ಮಿಲಿನ್ ಭಾರೀ ಡೌನ್ ಲೋಡ್ ಆಗಿವೆ. ಜಗತ್ತಿನಾದ್ಯಂತ ಕೋವಿಡ್ ವೈರಸ್ […]

Advertisement

Wordpress Social Share Plugin powered by Ultimatelysocial