ಡಾ ಬಾಬಾ ಸಾಹೇಬ್ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ರಾಜ್ಯದ ಡಿ ಎಸ್ ಎಸ್ ಸಂಘಟನೆ ದೀನರ,ದುರ್ಬಲ, ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಎದುರಿಸುತ್ತಾ ಕೊಲೆ,ಸುಲಿಗೆ ,ಸಾಮಾಜಿಕ ಬಹಿಷ್ಕಾರ, ಇನ್ನಿತರೆ ಪ್ರಕರಣಗಳಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ವಿಜಯಪುರ ಜಿಲ್ಲೆ ಉಪವಿಭಾಗದ ಅಧಿಕಾರಿ ಡಿ ವೈ ಎಸ್ ಪಿ ಶ್ರೀ.ಎಂ.ಬಿ ಸಂಕದ ಅವರು ದಲಿತರ ಮೇಲೆ ದೌರ್ಜನ್ಯ ನಡೆಯಲು ನೇರ ಕಾರಣರಾಗಿದ್ದಾರೆ. ಇವರ ಕರ್ತವ್ಯದಲ್ಲಿ ಬಹುತೇಕ ದೌರ್ಜನ್ಯ ಪ್ರಕರಣಗಳು “ಬಿ ” ರಿಪೋರ್ಟ್ ಹಾಕಿದ್ದಾರೆ. ಇವರ ವ್ಯಾಪ್ತಿಯಲ್ಲಿ ಇನ್ನೂ ಕೂಡಾ ಅಸ್ಪ್ರಶ್ಯತೆ ಜೀವಂತವಾಗಿದ್ದು, ದಲಿತರ ಮೇಲೆ ಹಲವಾರು ಕೇಸ್ ದಾಖಲು ಮಾಡಿ ದೌರ್ಜನ್ಯ ಎಸುಗುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ದಲಿತ ಚಳುವಳಿಗಾರ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ ಮಯೂರ ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿ ವೈಯಕ್ತಿಕ ದ್ವೇಷ ಸಾದಿಸುತ್ತಿದ್ದಾರೆ. ಆದ್ದರಿಂದ ಡಿ ಎಸ್ ಎಸ್ ದಲಿತ ಹೋರಾಟಗಾರರು ತಕ್ಷಣವೇ ಎಂ.ಬಿ ಸಂಕದ ರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಸಿ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ವಿಜಯಪುರದ ದಲಿತ ಸಂಘರ್ಷ ಸಮಿತಿಯ ಮನವಿ
Please follow and like us: