ವಿಶ್ವದಾದ್ಯಂತ ನಟ ಯಶ್ ಅವರ ಅಭಿಮಾನಿ ಬಳಗ ದೊಡ್ಡದಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಟ ಯಶ್ ಈಗ ಬಹುಮುಖ್ಯ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.
ಪಾನ್ ಮಸಾಲಾಗೆ ‘ ನೋ ‘ ಎಂದ ಯಶ್ !
ಪಾನ್ ಮಸಾಲಾ ಮತ್ತು ಏಲಕ್ಕಿ ಬ್ರ್ಯಾಂಡ್ನ ಬಹುಕೋಟಿ ಎಂಡಾರ್ಸ್ಮೆಂಟ್ ಒಪ್ಪಂದವನ್ನು ರಾಕಿಂಗ್ ಸ್ಟಾರ್ ಯಶ್ ತಿರಸ್ಕರಿಸಿದ್ದಾರೆ. ಈ ಸುದ್ದಿಯನ್ನು ಯಶ್ ಅವರ ಎಂಡಾರ್ಸ್ಮೆಂಟ್ ಡೀಲ್ಗಳನ್ನು ನಿರ್ವಹಿಸುವ ಸಂಸ್ಥೆ ಎಕ್ಸೀಡ್ ಎಂಟರ್ಟೇನ್ಮೆಂಟ್ ಖಚಿತ ಪಡಿಸಿದೆ.
ಎಕ್ಸೀಡ್ ಎಂಟರ್ ಟೇನ್ ಮೆಂಟ್ ಹೇಳಿರುವುದೇನು ?
ನಟ ಯಶ್ ಅವರ ಎಂಡಾರ್ಸ್ಮೆಂಟ್ ಡೀಲ್ಗಳನ್ನು ನಿರ್ವಹಿಸುವ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿಯಾದ ಎಕ್ಸೀಡ್ ಎಂಟರ್ಟೇನ್ಮೆಂಟ್ನ ಟ್ಯಾಲೆಂಟ್ ಮತ್ತು ನ್ಯೂ ವೆಂಚರ್ಸ್ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ, ”ಪಾನ್ ಮಸಾಲಾಗಳು ಮತ್ತು ಅಂತಹ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಇದರಿಂದ ಜೀವಕ್ಕೆ ಅಪಾಯ ಉಂಟಾಗುತ್ತದೆ. ತಮ್ಮ ಅಭಿಮಾನಿಗಳ ಹಿತದೃಷ್ಟಿಯಿಂದ ವೈಯಕ್ತಿಕವಾಗಿ ಲಾಭದಾಯಕವಾದ ಒಪ್ಪಂದವನ್ನು ಯಶ್ ನಿರಾಕರಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಅಲ್ಲು ಅರ್ಜುನ್ ಕೂಡ ಇದೇ ನಿರ್ಧಾರ ಕೈಗೊಂಡಿದ್ದರು !
”ವೈಯಕ್ತಿಕವಾಗಿ ನಾನು ತಂಬಾಕು ಸಹಿತ ಉತ್ಪನ್ನ ಸೇವಿಸುವುದಿಲ್ಲ. ಅಭಿಮಾನಿಗಳು ಕೂಡ ಅದನ್ನು ಸೇವಿಸಬಾರದು. ಅದು ವ್ಯಸನವಾಗುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದ ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಪಾನ್ ಮಸಾಲಾ ಮತ್ತು ತಂಬಾಕು ಜಾಹೀರಾತಿಗೆ ‘ನೋ’ ಎಂದಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: