ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್

ವಿಶ್ವದಾದ್ಯಂತ ನಟ ಯಶ್ ಅವರ ಅಭಿಮಾನಿ ಬಳಗ ದೊಡ್ಡದಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಟ ಯಶ್ ಈಗ ಬಹುಮುಖ್ಯ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.

ಪಾನ್ ಮಸಾಲಾಗೆ ‘ ನೋ ‘ ಎಂದ ಯಶ್ !
ಪಾನ್ ಮಸಾಲಾ ಮತ್ತು ಏಲಕ್ಕಿ ಬ್ರ್ಯಾಂಡ್‌ನ ಬಹುಕೋಟಿ ಎಂಡಾರ್ಸ್‌ಮೆಂಟ್ ಒಪ್ಪಂದವನ್ನು ರಾಕಿಂಗ್ ಸ್ಟಾರ್ ಯಶ್ ತಿರಸ್ಕರಿಸಿದ್ದಾರೆ. ಈ ಸುದ್ದಿಯನ್ನು ಯಶ್ ಅವರ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನಿರ್ವಹಿಸುವ ಸಂಸ್ಥೆ ಎಕ್ಸೀಡ್ ಎಂಟರ್‌ಟೇನ್‌ಮೆಂಟ್ ಖಚಿತ ಪಡಿಸಿದೆ.

ಎಕ್ಸೀಡ್ ಎಂಟರ್ ‌ ಟೇನ್ ‌ ಮೆಂಟ್ ಹೇಳಿರುವುದೇನು ?
ನಟ ಯಶ್ ಅವರ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನಿರ್ವಹಿಸುವ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯಾದ ಎಕ್ಸೀಡ್ ಎಂಟರ್‌ಟೇನ್‌ಮೆಂಟ್‌ನ ಟ್ಯಾಲೆಂಟ್ ಮತ್ತು ನ್ಯೂ ವೆಂಚರ್ಸ್ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ, ”ಪಾನ್ ಮಸಾಲಾಗಳು ಮತ್ತು ಅಂತಹ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಇದರಿಂದ ಜೀವಕ್ಕೆ ಅಪಾಯ ಉಂಟಾಗುತ್ತದೆ. ತಮ್ಮ ಅಭಿಮಾನಿಗಳ ಹಿತದೃಷ್ಟಿಯಿಂದ ವೈಯಕ್ತಿಕವಾಗಿ ಲಾಭದಾಯಕವಾದ ಒಪ್ಪಂದವನ್ನು ಯಶ್ ನಿರಾಕರಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಅಲ್ಲು ಅರ್ಜುನ್ ಕೂಡ ಇದೇ ನಿರ್ಧಾರ ಕೈಗೊಂಡಿದ್ದರು !
”ವೈಯಕ್ತಿಕವಾಗಿ ನಾನು ತಂಬಾಕು ಸಹಿತ ಉತ್ಪನ್ನ ಸೇವಿಸುವುದಿಲ್ಲ. ಅಭಿಮಾನಿಗಳು ಕೂಡ ಅದನ್ನು ಸೇವಿಸಬಾರದು. ಅದು ವ್ಯಸನವಾಗುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದ ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಪಾನ್ ಮಸಾಲಾ ಮತ್ತು ತಂಬಾಕು ಜಾಹೀರಾತಿಗೆ ‘ನೋ’ ಎಂದಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹರಳು ಮಾಫಿಯಾ ಮೇಲೆ ಮಾಯಾವಿ ಸಂಚಾರ!

Sun May 1 , 2022
ಉಂಗುರ, ಆಭರಣಗಳಿಗೆ ಬಳಸುವ ಅಪರೂಪದ ಹರಳುಗಳಿಗಿರುವ ಬೇಡಿಕೆ, ಮಾರುಕಟ್ಟೆ, ಪಶ್ಚಿಮ ಘಟ್ಟದ ಗಣಿಗಾರಿಕೆ ಹಿಂದಿನ ಮಾಫಿಯಾ, ಆಡಳಿಶಾಹಿ ಮತ್ತು ಅಧಿಕಾರಶಾಹಿ ವ್ಯವಸ್ಥೆ, ಇವೆಲ್ಲದರ ನಡುವೆ ನಲುಗಿ ಹೋಗುವ ಪರಿಸರ, ನರಳುವ ಜನಸಾಮಾನ್ಯರ ಬದುಕು ಇವೆಲ್ಲದಕ್ಕೂ ತನ್ನದೇ ಆದ ಮಾರ್ಗದಲ್ಲಿ ತಾರ್ಕಿಕ ಅಂತ್ಯ ಹಾಡುವವನೇ “ಮೇಲೊಬ್ಬ ಮಾಯಾವಿ’. ಆ “ಮಾಯಾವಿ’ ಯಾರು? ಅನ್ನೋ ಕುತೂಹಲವನ್ನು ತೆರೆಮೇಲೆ ನೋಡುವುದೇ ಒಳ್ಳೆಯದು. ನಿರ್ದೇಶಕ ನವೀನ್‌ ಕೃಷ್ಣ ಆಯ್ಕೆ ಮಾಡಿರುವ ಪಶ್ಚಿಮ ಘಟ್ಟದ ಹರಳು ಮಾಫಿಯಾ […]

Advertisement

Wordpress Social Share Plugin powered by Ultimatelysocial