ಸಂಗೊಳ್ಳಿ ರಾಯಣ್ಣ ನಂತಹ ಅದ್ಧುತ ಪಾತ್ರವನ್ನ ನಿಭಾಯಿಸಿದಂತಗ ಚಾಲೆಂಜಿAಗ್ ಸ್ಟಾರ್ ದರ್ಶನ್ ಅವರು ಇದೀಗ ಶೂರ ಲಕ್ಚö್ಮಣ ಎಂಬ ಪಾತ್ರಕ್ಕೆ ಬಣ್ಣ ಹಚ್ಚಲು ತಯಾರಾಗುತ್ತಿದ್ದಾರೆ. ಈಗಾಗಲೇ ಚಿತ್ರದ ಸ್ಕಿçಪ್ಟ್ ವರ್ಕ್ ಬಹುತೇಕವಾಗಿ ಮುಗಿದಿದ್ದು ಕೊನೆ ಹಂತದ ಕೆಲಸದಲ್ಲಿದೆ ಚಿತ್ರತಂಡ ಈ ವಿಚಾರವನ್ನ ಖುದ್ದು ತರುಣ್ ಸುಧೀರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡಿದ್ದಾರೆ. ಸರ್ಪ್ರೈಸ್ ನ್ಯೂಸ್ ಕೇಳಿ ಡಿ ಬಾಸ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಈಗಾಗಲೇ ಸಂಗೊಳ್ಳಿ ರಾಯಣ್ಣನಾಗಿ ಐತಿಹಾಸಿಕ ಪಾತ್ರದಲ್ಲಿ ದುರ್ಯೋಧನನಾಗಿ ಪೌರಾಣಿಕ ಪಾತ್ರದಲ್ಲಿ ಮಿಂಚಿರೋ ದರ್ಶನ್ ಮದಕರಿ ನಾಯಕರಾಗಿ ಮತ್ತೆ ಐತಿಹಾಸಿಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೀಗ ಮತ್ತೆ ಐತಿಹಾಸಿಕ ವೀರನ ಪಾತ್ರದಲ್ಲಿ ದರ್ಶನ್ ನಟಿಸ್ತಿರೋ ವಿಶೇಷ.ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನಾಗಿ ದರ್ಶನ್ ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಲಕ್ಷ್ಮಣ ತನ್ನದೇ ಆದ ರೀತಿಯಲ್ಲಿ ಆಂಗ್ಲ ಸರ್ಕಾರದ ವಿರುದ್ಧ ಸಮರ ಸಾರಿದ ವೀರ. ಈಗಿನ ಮಹಾರಾಷ್ಟ್ರದಲ್ಲಿರುವ ಜತ್ತ ಸಂಸ್ಥಾನದ ಸಿಂಧೂರಿನಲ್ಲಿ ಜನಿಸಿದ ಲಕ್ಷ್ಮಣ ಸಣ್ಣ ವಯಸ್ಸಿನಲ್ಲೇ ದೊಡ್ಡ ಮಟ್ಟದ ಕ್ರಾಂತಿ ಮಾಡಿದ ವೀರ. ಬ್ರಿಟೀಷರಿಂದ ಮತ್ತು ನಿರ್ದಯಿ ಶ್ರೀಮಂತರಿAದ ದೋಚಿ ಬಡವರಿಗೆ, ಅಸಹಾಯಕರಿಗೆ ಹಂಚಿ ಬಡವರ ಬಂಧು ಅಂತ್ಲೇ ಲಕ್ಷ್ಮಣ ಮನೆಮಾತಾಗಿದ್ದ.
ಐತಿಹಾಸಿಕ ಪಾತ್ರದಲ್ಲಿ ಚಾಲೆಂಜಿoಗ್ ಸ್ಟಾರ್
Please follow and like us: