ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಾರತ್ ಜೋಡೊ ಯಾತ್ರೆ ನಡುವೆ ಪೊಲೀಸ್ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕ್ವಾಜಿಗುಂಡ್ ನಲ್ಲಿ ಪತ್ರಿಕಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಂದು ಬೆಳಿಗ್ಗೆ ನಮಗೆ ಸಾಕಷ್ಟು ಜನಸಂದಣಿ ನೆರೆದಿತ್ತು.
ದುರದೃಷ್ಟವಶಾತ್, ಜನಸಂದಣಿಯನ್ನು ನಿರ್ವಹಿಸಬೇಕಾದ ಪೊಲೀಸರು ಎಲ್ಲಿಯೂ ಕಾಣಲಿಲ್ಲ. ಯಾತ್ರೆಯಲ್ಲಿ ನಾನು ಮುಂದೆ ಸಾಗಲು ನನ್ನ ಭದ್ರತಾ ಸಿಬ್ಬಂದಿ ಬಿಡಲಿಲ್ಲ. ನನ್ನ ಯಾತ್ರೆಯನ್ನು ರದ್ದುಗೊಳಿಸಬೇಕಾಯಿತು ಎಂದು ಆರೋಪಿಸಿದರು.
ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸುವುದು, ಜನಸಂದಣಿಯನ್ನು ನಿಯಂತ್ರಿಸುವುದು ಆಡಳಿತದ ಜವಾಬ್ದಾರಿಯಾಗಿದೆ. ಇದು ಏಕೆ ಸಂಭವಿಸಿತು ಎಂದು ನನಗೆ ತಿಳಿದಿಲ್ಲ, ಆದರೆ ಇದು ನಾಳೆ ಮತ್ತು ಮರುದಿನ ಸಂಭವಿಸಬಾರದು ಎಂದು ಸೂಚಿಸಿದರು.
ಜಮ್ಮು ಮತ್ತು ಕಾಶ್ಮೀರದ ಕ್ವಾಜಿಗುಂಡ್ನಲ್ಲಿ ಇಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯ ನಡುವೆ ಗಂಭೀರ ಭದ್ರತಾ ಲೋಪವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದ ಬೆನ್ನಲ್ಲೇ, ಪಕ್ಷದ ನಾಯಕ ಕೆಸಿ ವೇಣುಗೋಪಾಲ್ ಅವರು 15 ನಿಮಿಷಗಳ ಕಾಲ ಯಾತ್ರೆಯನ್ನು ಸಿಲ್ಲಿಸಿ ರಾಹುಲ್ ಗಾಂಧಿಯನ್ನು ಕಾರಿನಲ್ಲಿ ಕಳುಹಿಸಿದ್ದರು.
ಇಲ್ಲಿ ಸಂಬಂಧಿಸಿದ ಏಜೆನ್ಸಿಗಳು ಭದ್ರತೆಯನ್ನು ತಪ್ಪಾಗಿ ನಿರ್ವಹಿಸಿದ್ದಾರೆ. ಕಳೆದ 15 ನಿಮಿಷಗಳಿಂದ ಇಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಯಾವುದೇ ಭದ್ರತಾ ಅಧಿಕಾರಿಗಳು ಇಲ್ಲ. ಇದು ಗಂಭೀರ ಲೋಪವಾಗಿದೆ. ರಾಹುಲ್ ಗಾಂಧಿ ಮತ್ತು ಇತರ ಯಾತ್ರಿಗಳು ಯಾವುದೇ ಭದ್ರತೆಯಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂದು ವೇಣುಗೋಪಾಲ್ ಗುಡುಗಿದ್ದರು.
ಕ್ವಾಜಿಗುಂಡ್ನಲ್ಲಿ ಇಂದು ಬೆಳಗಿನ ಜಾವದ ಗಂಭೀರ ಭದ್ರತಾ ಲೋಪದ ಕುರಿತು ಅನಂತ್ನಾಗ್ನಲ್ಲಿ ಮಧ್ಯಾಹ್ನ 2:30 ಗಂಟೆಗೆ ರಾಹುಲ್ ಗಾಂಧಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಬನಿಹಾಲ್ನಿಂದ, ಯಾತ್ರೆಯು ಕಾಜಿಗುಂಡ್ ಮೂಲಕ ಕಾಶ್ಮೀರ ಕಣಿವೆಯನ್ನು ಪ್ರವೇಶಿಸಿ ಅನಂತನಾಗ್ ಜಿಲ್ಲೆಯ ಖಾನಬಲ್ ಪ್ರದೇಶವನ್ನು ತಲುಪಲು ಅಲ್ಲಿ ರಾತ್ರಿ ತಂಗಲಿದೆ.
ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆ ಪಂಜಾಬ್ ಮೂಲಕ ಜಮ್ಮು-ಕಾಶ್ಮೀರ ಪ್ರವೇಶಿಸಿತ್ತು.ಜನವರಿ 30 ರಂದು ಶ್ರೀನಗರದ ಪಕ್ಷದ ಪ್ರಧಾನ ಕಛೇರಿಯಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜವನ್ನು ಹಾರಿಸುವುದರೊಂದಿಗೆ ಯಾತ್ರೆಯ ಮೆರವಣಿಗೆಯು ಮುಕ್ತಾಯಗೊಳ್ಳಲಿದೆ.
https://play.google.com/store/apps/details?id=com.speed.newskannada