ಹೈದರಾಬಾದ್ : ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ ಬೆನ್ನಲ್ಲೆ ಇದೀಗ ತೆಲಂಗಾಣದಲ್ಲಿ ಕ್ಯೂ ಜ್ವರ (Q fever) ಪ್ರಕರಣಗಳು ಹೆಚ್ಚಾಗಿದ್ದು, ಅನೇಕ ಕಸಾಯಿಖಾನೆಗಳಿಗೆ ನಗರದ ಕಸಾಯಿಖಾನೆಗಳಿಂದ ದೂರವಿರಲು ಮಾಂಸ ವ್ಯಾಪಾರಿಗಳಿಗೆ ಸಲಹೆ ನೀಡಲಾಗಿದೆ ̤
ಕ್ಯೂ ಜ್ವರವೂ ಜಾನುವಾರುಗಳು ಮತ್ತು ಆಡುಗಳಿಂದ ಹರಡುವ ಈ ಬ್ಯಾಕ್ಟೀರಿಯಾದ ಸೋಂಕಿನಿಂದಾಗಿ, ರೋಗಿಗಳು ಜ್ವರ, ಆಯಾಸ, ತಲೆನೋವು, ಎದೆ ನೋವು ಮತ್ತು ಅತಿಸಾರದಂತಹ ರೋಗಲಕ್ಷಣಗಳನ್ನು ಹೊಂದಿದೆ..
ಹೈದರಾಬಾದ್ ಮೂಲದ ರಾಷ್ಟ್ರೀಯ ಸಂಶೋಧನಾ ಕೇಂದ್ರ (ಎನ್ಆರ್ಸಿಎಂ) 250 ಮಾದರಿಗಳ ಪೈಕಿ 5 ಮಾಂಸದ ವ್ಯಾಪಾರಿಗಳಿಗೆ ಕಾಕ್ಸಿಯೆಲ್ಲಾ ಬರ್ನೆಟೈ ಎಂಬ ಬ್ಯಾಕ್ಟೀರಿಯಂನಿಂದ Q ಜ್ವರ ಕಂಡುಬಂದಿದೆ ಎಂದು ಸಿರೊಲಾಜಿಕಲ್ ಪರೀಕ್ಷೆಗಳ ಮೂಲಕ ಕ್ಯೂ ಜ್ವರವನ್ನು ದೃಢಪಡಿಸಿದೆ. ಶೇ.5 ಕ್ಕಿಂತ ಕಡಿಮೆ ಮಂದಿಯಲ್ಲಿ ರೋಗ ಪತ್ತೆಯಾದ ತಕ್ಷಣ ಅಧಿಕಾರಿಗಳು ಸೋಂಕಿತ ಮಾಂಸ ವ್ಯಾಪಾರಿಗಳನ್ನು ಕಸಾಯಿಖಾನೆಯಿಂದ ದೂರವಿಡುವಂತೆ ಆದೇಶಿಸಿದರು.
ಈ ಸೋಂಕಿನ ವಿರುದ್ಧ ದೇಹದಲ್ಲಿ ಪ್ರತಿಕಾಯಗಳು ಇರುವುದನ್ನು ಸಿರೊಪೊಸಿಟಿವ್ ಪರೀಕ್ಷೆ ತೋರಿಸುತ್ತದೆ ಎಂದು ವೈದ್ಯರು ಹೇಳಿದರು. ಸೈಟಾಕೋಸಿಸ್ ಮತ್ತು ಹೆಪಟೈಟಿಸ್ ಇ ನಂತಹ ಝೂನೋಟಿಕ್ ಕಾಯಿಲೆಗಳು ಕಂಡುಬಂದಿವೆ ಎಂದು ವರದಿ ಹೇಳುತ್ತದೆ. ಸೋಂಕಿತ ಗಿಳಿಗಳಿಂದ ಸಿಟ್ಟಾಕೋಸಿಸ್ ಮನುಷ್ಯರಿಗೆ ಹರಡುತ್ತದೆ. ಕಸಾಯಿ ಖಾನೆಗಳಿಗೆ ಗಾಳಿಯ ಮೂಲಕ ಸೋಂಕು ತಗುಲುವ ಭೀತಿ ಎದುರಾಗಿದೆ.
ಇದುವರೆಗೆ ಕೆಲವೇ ಮಾಂಸ ವ್ಯಾಪಾರಿಗಳಿಗೆ ಸೋಂಕು ತಗುಲಿರುವುದರಿಂದ ಗಾಬರಿಪಡುವ ಅಗತ್ಯವಿಲ್ಲ ಎಂದು ಜಿಎಚ್ಎಂಸಿ ಮುಖ್ಯ ಪಶುವೈದ್ಯಾಧಿಕಾರಿ ಅಬ್ದುಲ್ ವಕೀಲ್ ಸ್ಪಷ್ಟಪಡಿಸಿದ್ದಾರೆ. ಜಾನುವಾರುಗಳ ಸೋಂಕಿನ ಬಗ್ಗೆ ಭಾರೀ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಹೈದರಾಬಾದ್ನಲ್ಲಿ ‘ಕ್ಯೂ ಜ್ವರ’, ಕಸಾಯಿಖಾನೆಗಳಿಂದ ದೂರವಿರಲು ಸಲಹೆಯಷ್ಟೇ ಅಲ್ಲದೆ ಹೊಸ ರೋಗದ ಬಗ್ಗೆ ಜಾಗರೂಕರಾಗಿರಿ ಎಂದು ತಿಳಿಸಿದ್ದಾರೆ.
https://play.google.com/store/apps/details?id=com.speed.newskannada