ನವದೆಹಲಿ:”ಅಂತಾರಾಷ್ಟ್ರೀಯ ಮತ್ತು ದೇಶೀಯ ಮಟ್ಟದ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿಗಳು ತಮ್ಮ ‘ಸರ್ಚ್ ರಿಸಲ್ಟ್’ನಲ್ಲಿ ಸುದ್ದಿಗಳನ್ನು ಮತ್ತು ಸುದ್ದಿ ಲಿಂಕ್ಗಳನ್ನು ಒದಗಿಸುವ ಮೂಲಕ ಪಡೆಯುವ ಲಾಭದಲ್ಲಿ ಇಂತಿಷ್ಟು ಪಾಲನ್ನು ನಿಗದಿತ ಮಾಧ್ಯಮ ಸಂಸ್ಥೆಗೆ ನೀಡಬೇಕು.
ಈ ಮೂಲಕ ದೇಶದ ಡಿಜಿಟಲ್ ಮಾಧ್ಯಮ ಅಭಿವೃದ್ಧಿಗೆ ಬೆಂಬಲ ನೀಡಬೇಕು, ” ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಪ್ರತಿಪಾದಿಸಿದ್ದಾರೆ.
ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (ಡಿಎನ್ಪಿಎ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮ್ಮೇಳನದಲ್ಲಿ ಮಾತನಾಡಿದ ಸಚಿವ ರಾಜೀವ್, “ಡಿಜಿಟಲ್ ನ್ಯೂಸ್ ಉದ್ದಿಮೆ ಮಾತ್ರವಲ್ಲ, ಮುದ್ರಣ ಮಾಧ್ಯಮ ಕೂಡ ಸದ್ಯ ಸಂಕಷ್ಟದಲ್ಲಿದೆ. ಮೂಲತಃ ಇವರುಗಳೇ ನೈಜ ಮತ್ತು ಸ್ಪಷ್ಟ ಮಾಹಿತಿಯ ಸೃಷ್ಟಿಕರ್ತರು. ದೊಡ್ಡ ತಂತ್ರಜ್ಞಾನ ಕಂಪನಿಗಳು ಕೇವಲ ನ್ಯೂಸ್ ಮತ್ತು ಸುದ್ದಿ ಹೊಂದಿರುವ ವೆಬ್ಸೈಟ್ಗಳ ಲಿಂಕ್ಗಳನ್ನು ಶೇಖರಿಸಿ ಇಂಟರ್ನೆಟ್ ಬಳಕೆದಾರರಿಗೆ ನೀಡುತ್ತವೆ ಅಷ್ಟೇ. ಟೆಕ್ ಕಂಪನಿಗಳ ಸುದ್ದಿಯ ಸಂಗ್ರಹಕಾರರು ಮಾತ್ರ. ಹಾಗಾಗಿ ಅವರ ಆದಾಯದಲ್ಲಿ ನ್ಯೂಸ್ ಸೃಷ್ಟಿಕರ್ತರಿಗೆ ಪಾಲು ಸಿಗುವುದು ನ್ಯಾಯ,” ಎಂದು ಅಭಿಪ್ರಾಯಪಟ್ಟಿದ್ದಾರೆ.
https://play.google.com/store/apps/details?id=com.speed.newskannada