ಅಪ್ಪು ಡೈರಿಯಲ್ಲಿತ್ತು ಮಹತ್ವದ ವಿಷಯ: ಅಶ್ವಿನಿ ತೆಗೆದುಕೊಂಡ ನಿರ್ಧಾರಕ್ಕೆ ಶ್ಲಾಘನೆಗಳ ಮಹಾಪೂರ

ಅಪ್ಪು ಡೈರಿಯಲ್ಲಿತ್ತು ಮಹತ್ವದ ವಿಷಯ: ಅಶ್ವಿನಿ ತೆಗೆದುಕೊಂಡ ನಿರ್ಧಾರಕ್ಕೆ ಶ್ಲಾಘನೆಗಳ ಮಹಾಪೂರ

ಬೆಂಗಳೂರು: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಎಲ್ಲರನ್ನೂ ಅಗಲಿ ಎರಡು ತಿಂಗಳಾಗುತ್ತಾ ಬಂದಿದೆ. ಆದರೆ ಅವರು ಮಾಡಿರುವ ಮಹತ್ಕಾರ್ಯದ ಕುರಿತು ಇಂದಿಗೂ ದಿನವೂ ಒಂದೊಂದು ಘಟನೆಗಳು ಹೊರಬರುತ್ತಲೇ ಇವೆ. ಇದೀಗ ಅವರ ಪತ್ನಿ ಅಶ್ವಿನಿಯವರು ಮಾಡಿರುವ ಒಂದು ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.

ಅದೇನೆಂದರೆ, ಅಶ್ವಿನಿಯವರು ಅಪ್ಪು ಅವರ ಡೈರಿಯನ್ನು ಓದಿದಾಗ ಅದರಲ್ಲಿ ಅವರಿಗೆ ಪುನೀತ್‌ ರಾಜ್‌ಕುಮಾರ್‌ ಕೆಲವು ಚಿತ್ರಗಳಿಗೆ ಮುಂಗಡ ಹಣ ಪಡೆದಿರುವುದು ತಿಳಿದಿದೆ. ಒಮ್ಮೆ ಮುಂಗಡವಾಗಿ ಪಡೆದುಕೊಂಡ ಹಣವನ್ನು ಯಾವುದಾದರೂ ಕಾರಣಕ್ಕೆ ಚಿತ್ರ ಕ್ಯಾನ್ಸಲ್‌ ಆದರೆ ಹಿಂದಕ್ಕೆ ಕೊಡುವುದು ತೀರಾ ಕಮ್ಮಿ ಎಂದೇ ಹೇಳಲಾಗುತ್ತದೆ. ಆದರೆ ಅಶ್ವಿನಿಯವರು ಹಾಗೆ ಮಾಡಲಿಲ್ಲ. ಪುನೀತ್‌ ಅವರು ಕೆಲವೊಂದು ಚಿತ್ರಕ್ಕೆ ಸಹಿ ಹಾಕಿ ಮುಂಗಡ ಹಣ ಪಡೆದುಕೊಂಡಿರುವುದು ತಿಳಿದ ತಕ್ಷಣವೇ ಅವರು ಕಾರ್ಯಪ್ರವೃತ್ತರಾಗಿದ್ದಾರೆ.

ಕೂಡಲೇ ಒಂದು ಚಿತ್ರಕ್ಕೆ ಅಪ್ಪು ಪಡೆದುಕೊಂಡಿರುವ ಎರಡೂವರೆ ಕೋಟಿ ರೂಪಾಯಿಗಳನ್ನು ಅವರು ಹಿಂದಕ್ಕೆ ತಿರುಗಿಸಿದ್ದಾರೆ. ಇವರ ಅಭಿನಯದ ಜೇಮ್ಸ್​ ಹಾಗೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಕಿ ಮ್ಯಾನ್​ ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದು, ಅವು ಬಿಡುಗಡೆಗೆ ಸಿದ್ಧಗೊಂಡಿವೆ. ಆದರೆ ಇನ್ನು ಕೆಲವು ಚಿತ್ರಗಳಿಗೆ ಅಪ್ಪು ಸಹಿ ಹಾಕಿದ್ದರು. ಆ ಬಗ್ಗೆ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದರು.

ಇದನ್ನು ಓದಿದ ಅಶ್ವಿನಿಯವರು ಕೂಡಲೇ ಚಿತ್ರವೊಂದರ ನಿರ್ಮಾಪಕರಿಗೆ ಕರೆ ಮಾಡಿ ಹಣವನ್ನು ಹಿಂದಿರುಗಿಸಿದ್ದಾರೆ. ಈ ಕುರಿತು ವೈರಲ್‌ ಆಗಿರುವ ಪೋಸ್ಟ್‌ ಅನ್ನು ನೋಡಿದ ನೆಟ್ಟಿಗರು ದೊಡ್ಮನೆ ಸೊಸೆಯ ಔದಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನಮ್‌ ಸಿನಿಮಾ ಇನ್‌ಸ್ಟಾಗ್ರಾಂನಲ್ಲಿ ಈ ವಿಷಯ ಶೇರ್‌ ಆಗಿದೆ. ಇದರಲ್ಲಿ ‘ಅವರು ಕನ್ನಡ ಸಿನಿಮಾ ನಿರ್ಮಾಪಕರು. ಅವರು ನನ್ನ ಪಕ್ಕ ಕುಳಿತಿದ್ದರು. ಆಗ ಅವರಿಗೆ ದೂರವಾಣಿ ಕರೆಯೊಂದು ಮಾಡಿದವರು ಹೇಳಿದವರು. ಅವರು ತಮ್ಮ ಡೈರಿಯಲ್ಲಿ ಬರೆದಿದ್ದಾರೆ. ನಿಮ್ಮಿಂದ ಸಿನಿಮಾ ಒಂದರ ಮುಂಗಡವಾಗಿ 2.5 ಕೋಟಿ ಪಡೆದಿದ್ದರಂತೆ. ನಾಳೆ ನೀವು ಮನೆಗೆ ಬಂದು ಈ ಹಣವನ್ನು ಪಡೆದುಕೊಂಡು ಹೋಗಿ ಎಂದರು ಆ ಮಹಿಳೆ..! ಹೀಗೆ ಹೇಳಿದ ಮಹಿಳೆ ಅಶ್ವಿನಿ ಪುನೀತ್​ ರಾಜ್​ಕುಮಾರ್​… ಇದು ಪ್ರಾಮಾಣಿಕ.. ಕನ್ನಡ ಜನ ಈ ಕುಟುಂಬವನ್ನು ಪ್ರೀತಿಸುವುದು ಈ ಕಾರಣಕ್ಕಾಗಿ. ಕನ್ನಡಿಗರ ಆರಾಧ್ಯ ದೈವ ರಾಜ್​ ಕುಟುಂಬ ಇರುವುದು ಹೀಗೆ’ ಎಂದು ಅದರಲ್ಲಿ ಬರೆಯಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಲೆ 'ಕೂದಲು' ಉದುರುತ್ತಿದೆಯೇ.? ಚಿಂತೆ ಬಿಡಿ

Thu Dec 23 , 2021
ಕೂದಲು ಹೆಚ್ಚಾಗಿ ಉದುರುತ್ತಿದ್ದರೆ, ಹೊಟ್ಟು ಹೆಚ್ಚಾಗಿದ್ದರೆ ಕೂದಲಿಗೆ ಈ ಹೇರ್ ಪ್ಯಾಕ್ ಅನ್ನು ಬಳಸಬಹುದು. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಅಲೋವೆರಾ, ಈರುಳ್ಳಿ, ಮತ್ತು ಆಲೂಗಡ್ಡೆಯನ್ನು ತೆಗೆದುಕೊಳ್ಳಿ. ಅಲೋವೆರಾವನ್ನು ಚೆನ್ನಾಗಿ ತೊಳೆದು ಮುಳ್ಳನ್ನು ಕತ್ತರಿಸಿ ತೆಗೆದು ಚಿಕ್ಕ ತುಂಡುಗಳಾಗಿ ಮಾಡಿ. ಅಲೋವೆರಾದಲ್ಲಿ ವಿಟಮಿನ್ ಇ ಹೇರಳವಾಗಿದೆ. ಇದು ಕೂದಲು ಉದ್ದ ಮತ್ತು ದಟ್ಟವಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಹಾನಿಯಾದ ಕೂದಲನ್ನು ಪೋಷಿಸುತ್ತದೆ. ಈರುಳ್ಳಿಯಲ್ಲಿ ಸಲ್ಫರ್ ಅಂಶ ಹೇರಳವಾಗಿದೆ. ಇದು […]

Advertisement

Wordpress Social Share Plugin powered by Ultimatelysocial