ಅಕ್ರಮ ಸಂಬಂಧಕ್ಕೆ ತಿರುಗಿದ ಸ್ನೇಹ.

ಬೆಂಗಳೂರು : ಅಕ್ರಮ ಸಂಬಂಧದ ಹಿನ್ನೆಲೆ ಮೇಲಿನ ಮನೆಯ ಅಂಕಲ್ ಜೊತೆ ಕೆಳಮನೆಯ ಆಂಟಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಒಂದೇ ವಸತಿ ಕಟ್ಟಡದಲ್ಲಿ ನೆಲೆಸಿದ್ದ ವಿವಾಹಿತ ಪುರುಷ ಹಾಗೂ ವಿವಾಹಿತ ಮಹಿಳೆ ನಾಪತ್ತೆ ಆಗಿರುವ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಕ್ರಮ ಸಂಬಂಧದ ಹಿನ್ನೆಲೆ ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಾರುತಿನಗರದ ನವೀದ್ ಹಾಗೂ ಶಾಜಿಯಾ ಎಂಬುವವರು ಪರಾರಿಯಾದವರು.

ಏನಿದು ಘಟನೆ

ಮಾರುತಿನಗರದ ನವೀದ್ ಹಾಗೂ ಜೀನತ್ 12 ವರ್ಷದ ಹಿಂದೆ ಮದುವೆಯಾಗಿದ್ದರು. . ಅದೇ ರೀತಿ 8 ವರ್ಷದ ಹಿಂದೆ ಮುಬಾರಕ್ ಹಾಗೂ ಶಾಜಿಯಾ ಎಂಬುವವರು ವಿವಾಹವಾಗಿದ್ದರು. ಮದುವೆಯಾದ ದಿನದಿಂದ ಸಂಸಾರ ಚೆನ್ನಾಗಿತ್ತು ಎನ್ನಲಾಗಿದೆ, ಆದರೆ ಬರುಬರುತ್ತಾ ಮೇಲಿನ ಮನೆಯ ಅಂಕಲ್ ಜೊತೆ ಕೆಳಮನೆಯ ಆಂಟಿ ಸ್ನೇಹ ಬೆಳೆಸಿದ್ದಾರೆ. ನವೀದ್ ಹಾಗೂ ಶಾಜಿಯಾ ನಡುವೆ ಪರಸ್ಪರ ಸ್ನೇಹ ಬೆಳೆದು, ಸ್ನೇಹ ಪ್ರೀತಿಗೆ ತಿರುಗಿ ನಂತರ ಅದ ಅಕ್ರಮ ಸಂಬಂಧಕ್ಕೆ ತಿರುಗಿದೆ. ನಂತರ ಮಾರುತಿನಗರದ ನವೀದ್ ಹಾಗೂ ಶಾಜಿಯಾ ಧಿಡೀರ್ ಆಗಿ ಕಣ್ಣೆರೆಯಾಗಿದ್ದು, ಈ ಬಗ್ಗೆ ಎರಡೂ ಕುಟುಂಬಗಳು ಪ್ರತ್ಯೇಕವಾಗಿ ದೂರು ದಾಖಲಿಸಿವೆ.

ಅಕ್ರಮ ಸಂಬಂಧ ಹಿನ್ನಲೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಡಿ.9 ರಂದು ನವೀದ್ ಹಾಗೂ ಶಾಜಿಯಾ ದಿಢೀರ್ ನಾಪತ್ತೆಯಾಗಿದ್ದು, ತನ್ನ ಪತ್ನಿ ಶಾಜಿಯಾ ಪುಟ್ಟ ಮಗುವನ್ನು ಕೂಡ ಕರೆದೊಯ್ದಿದ್ದಾಳೆ ಎಂದು ಪತಿ ಮುಬಾರಕ್ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿನಿ ಪ್ರೇಮಿಗಳ ಕಾತುರಕ್ಕೆ ಅರ್.ಚಂದ್ರು ಉತ್ತರ.

Sat Jan 21 , 2023
ಪ್ಯಾನ್ ಇಂಡಿಯಾ ಕಬ್ಜ ಚಿತ್ರತಂಡದಿಂದ ಬಿಗ್ ಅನೌನ್ಸ್ ಮೆಂಟ್..‼️ ಸಿನಿ ಪ್ರೇಮಿಗಳ ಕಾತುರಕ್ಕೆ ಅರ್.ಚಂದ್ರು ಉತ್ತರ. ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಮುಖ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿರುವ, ಖ್ಯಾತ ನಿರ್ದೇಶಕ ಆರ್.ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಪ್ರಪಂಚದಾದ್ಯಂತ ನಿರೀಕ್ಷೆ ಹುಟ್ಟು ಹಾಕಿದೆ. ಇದು ಕನ್ನಡ ಚಿತ್ರರಂಗದ ಹೆಮ್ಮೆ, ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಸಂಸ್ಥೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದೆ. ಭಾರತ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿಯೂ […]

Advertisement

Wordpress Social Share Plugin powered by Ultimatelysocial