ಧಾರವಾಡ ಕೃಷಿ ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ.

ಧಾರವಾಡ: ಧಾರವಾಡ ಕೃಷಿ ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಸಾವನ್ನಪ್ಪಿರುವ ಕಾರಣ ಒಂದು ಕಡೆ ನಿಗೂಢವಾದರೆ ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಇನ್ನೂ ನಿಗೂಢವಾಗಿದೆ. ಆತ ಸಂಪೂರ್ಣ ಬಟ್ಟೆ ಬಿಚ್ಚಿ ನಗ್ನ ಸ್ಥಿತಿಯಲ್ಲಿ ಸಾವಿಗೆ ಶರಣಾಗಿದ್ದಾನೆ.

ರೋಹಿತ್ ಸಿ‌ಪಿ‌ ಎಂಬಾತನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ವಿಜಯ ನಗರ ಜಿಲ್ಲೆಯ ಕೊಟ್ಟೂರ ನಿವಾಸಿಯಾಗಿರುವ ರೋಹಿತ್‌, ಬಿಎಸ್ಸಿ ಕಮ್ಯುನಿಟಿ ಸೈನ್ಸ್ ಕೊನೆಯ ವರ್ಷದಲ್ಲಿ ಓದುತ್ತಿದ್ದ. ಆತ ಹಾಸ್ಟೆಲ್‌ನಲ್ಲಿ ವಾಸವಾಗಿದ್ದು, ಭಾನುವಾರ ರಾತ್ರಿ ನೇಣಿಗೆ ಶರಣಾಗಿದ್ದಾನೆ. ಆತ ಮೈಮೇಲಿನ ಎಲ್ಲ ಬಟ್ಟೆಗಳನ್ನು ಬಿಚ್ಚಿಟ್ಟು ಸಾವಿಗೆ ಶರಣಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಈ ನಡುವೆ, ಮನೆಯವರು, ಕುಟುಂಬಿಕರು ಬಂದ ಮೇಲೆ ಶವವನ್ನು ಕೆಳಗೆ ಇಳಿಸಲಾಗಿದೆ. ರೋಹಿತ್‌ ಸಾವಿನ ದುಃಖ ಒಂದೆಡೆಯಾದರೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಮನೆಯವರನ್ನು ಇನ್ನಷ್ಟು ನೋವಿಗೆ ತಳ್ಳಿದೆ.

ಮೈಮೇಲಿದ್ದ ಬಟ್ಟೆಯನ್ನು ತನ್ನ ರೂಂ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ ಮೇಲೆಯೇ ಹಾಕಿದ್ದಾನೆ. ಈ ರೀತಿ ಯಾಕೆ ಮಾಡಿದ ಎನ್ನುವುದು ನಿಗೂಢವಾಗಿದೆ. ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಬ್ರಾಹಿಂ ಸುತಾರ ಕನ್ನಡನಾಡಿನ ಇಂದಿನ ಯುಗದ ಕಬೀರರೆಂಬ ಭಾವ ಮೂಡಿಸಿದ್ದವರು.

Mon Feb 6 , 2023
  ಇಬ್ರಾಹಿಂ ಸುತಾರ ಕನ್ನಡನಾಡಿನ ಇಂದಿನ ಯುಗದ ಕಬೀರರೆಂಬ ಭಾವ ಮೂಡಿಸಿದ್ದವರು. ಮಹಾಲಿಂಗಪುರದ ಇಬ್ರಾಹಿಂ ಸುತಾರ ವೈದಿಕ, ವಚನ ಹಾಗೂ ಸೂಫಿ ಪರಂಪರೆ ಆಶಯಗಳ ಹದ ಪಾಕವನ್ನು ಭಜನೆ, ಪ್ರವಚನ, ಸಂವಾದಗಳ ಮೂಲಕ ಉಣಬಡಿಸಿದ ಮಹಾನುಭಾವ.ಇಬ್ರಾಹಿಂ ಸುತಾರ 1940ರ ಮೇ 10ರಂದು ಜನಿಸಿದರು. ತಂದೆ ಮಹಾಲಿಂಗಪುರದಲ್ಲಿ ಬಡಗಿ ವೃತ್ತಿ ಮಾಡುತ್ತಿದ್ದ ನಬಿಸಾಹೇಬ್. ತಾಯಿ ಅಮೀನಾಬಿ. ಮನೆಯಲ್ಲಿನ ಬಡತನ ಮೂರನೇ ತರಗತಿಗೆ ಅವರ ಶಿಕ್ಷಣವನ್ನು ನಿಲ್ಲಿಸಿತು. ಊರಿನ ಬಹುಸಂಖ್ಯಾತರ ಉದ್ಯೋಗ ನೇಕಾರಿಕೆಯನ್ನೇ […]

Advertisement

Wordpress Social Share Plugin powered by Ultimatelysocial