ಕಲ್ಯಾಣ್ ಕರ್ನಾಟಕದ ಹೆಬ್ಬ ಬಾಗಿಲು ಆಗಿರುವ ಕಲಬುರ್ಗಿ ನಗರಕ್ಕೆ ಇಂದು ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರು ಬೃಹತ್ ರೋಡ್ ಶೋ ಮಾಡಲಿದ್ದಾರೆ. ದಕ್ಷಿಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀ ದತ್ತಾತ್ರೆಯ ಸಿ ಪಾಟೀಲ್, ಮತ್ತು ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಚಂದು ಪಾಟೀಲ್ ಅವರ ಪರ ರೋಡ್ ಶೋ ಮಾಡಲಿದ್ದಾರೆ.
ವಿಶೇಷವಾಗಿ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ, ಬಹಳ ಸುಂದರವಾಗಿ ಮೋದಿ ಪ್ರತಿಮೆಯನ್ನು ಕಲಬುರ್ಗಿಯಲ್ಲಿ ತಯಾರಿಸಿದ್ದಾರೆ. ಇಂದು ರೋಡ್ ಶೋ ಮೂಲಕ ಹೋಗುವಾಗ, ಕಲಾವಿದರಾದ ಶ್ರೀ ವಿಶ್ವೇಶ್ವರಯ್ಯ ಅವರ ಕೈಯಿಂದ ಶ್ರೀ ಮೋದಿಜಿ ಅವರಿಗೆ ಕಾಣಿಕೆಯಾಗಿ ಕೊಡಲಿದ್ದಾರೆ ಎಂದು ವಿಶ್ವೇಶ್ವರಯ್ಯ ಅವರು ತಿಳಿಸಿದ್ದಾರೆ.
https://play.google.com/store/apps/details?id=com.speed.newskannada