ಬಿಜೆಪಿ ಪ್ರಚಾರ ವಾಹನ‌ ಹಾಗೂ ಬೈಕ್ ನಡುವೆ ಅಪಘಾತ.

ಬಿಜೆಪಿ ಪ್ರಚಾರ ವಾಹನ‌ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನರಹರಿ ಪರ್ವತದ ಬಳಿ ನಡೆದಿದೆ.ದಕ್ಷಿಣ ಕನ್ನಡ: ಬಿಜೆಪಿ ಪ್ರಚಾರ ವಾಹನ‌ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನರಹರಿ ಪರ್ವತದ ಬಳಿ ನಡೆದಿದೆ.

ವಿಜಿತ್​(35) ಮೃತ ಬೈಕ್ ಸವಾರ. ಅಪಘಾತದ ವೇಳೆ ಗಾಯಗೊಂಡಿದ್ದ ವಿಜಿತ್​ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್​ ಚುನಾವಣಾ ಪ್ರಚಾರದ ವಾಹನ ಕಲ್ಲಡ್ಕ ಕಡೆಗೆ ತೆರಳುತ್ತಿತ್ತು. ಕಲ್ಲಡ್ಕದಿಂದ ಮೆಲ್ಕಾರ್ ಕಡೆಗೆ ಬೈಕ್ ಸವಾರ ವಿಜಿತ್ ತೆರಳುತ್ತಿದ್ದು, ಈ ವೇಳೆ ಅಪಘಾತ ಸಂಭವಿಸಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇಬ್ಬರು ದ್ವಿಚಕ್ರವಾಹನ ಕಳ್ಳರ ಬಂಧನ  ಬೆಂಗಳೂರು: ದ್ವಿಚಕ್ರವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಾಣಸವಾಡಿ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಅನ್ಬು (29), ಹಾಗೂ ರಾಜು (22) ಬಂಧಿತ ಆರೋಪಿಗಳು. ಸದ್ಯ ಬಂಧಿತರಿಂದ 2.5 ಲಕ್ಷ ಮೌಲ್ಯದ ನಾಲ್ಕು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಬಾಣಸವಾಡಿ ಕೆಎಸ್​ಎಸ್​ಸಿ ಲೇಔಟ್​ನಲ್ಲಿ ಹಾಡುಹಗಲ್ಲೆ ಆರೋಪಿಗಳು ಕೃತ್ಯವೆಸಗಿದ್ದರು. ಈ ಹಿಂದೆ ಪುಲಿಕೇಶಿ ನಗರ, ಹೆಣ್ಣೂರು, ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲೂ ಕೃತ್ಯವೆಸಗಿದ್ದರು. ಜೈಲಿಗೆ ಹೋಗಿ ಬಂದ್ರು ಆರೋಪಿಗಳು ಬುದ್ದಿ ಕಲಿಯದೆ ಮತ್ತೆ ತಮ್ಮ ಕೈಚಳಕ ತೋರಿಸಿದ್ದರು. ಪ್ರಕರಣ ದಾಖಲಿಸಿ ಆರೋಪಿಗಳನ್ನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.  ನಟೋರಿಯಸ್ ಸುಲುಗೆಕೋರರು ಅರೆಸ್ಟ್‌

ಬೆಂಗಳೂರು: ತಲೆನೋವಾಗಿದ್ದ ನಟೋರಿಯಸ್ ಸುಲುಗೆಕೋರರು ಅರೆಸ್ಟ್‌ ಆಗಿದ್ದಾರೆ. 77 ಪ್ರಕರಣದಲ್ಲಿ ಬೇಕಾಗಿದ್ದ ಅಬ್ರಹಾರ್ ಹಾಗೂ ಅಫ್ತಾಬ್ ಎಂಬ ಆರೋಪಿಗಳನ್ನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಬ್ರಹಾರ್ ಟೀಂ ಹಾಡಹಗಲೇ ಲಾಂಗ್ ಹಿಡಿದು ಸುಲಿಗೆ ಮಾಡ್ತಿದ್ದರು. ಬಿಟಿಎಂ ಲೇಔಟ್ ನಲ್ಲಿ ರಸ್ತೆಯಲ್ಲೇ ಮಚ್ಚೆತ್ತಿ ಸುಲಿಗೆ ಮಾಡಿದ್ದರು. ರಾಜಗೋಪಲನಗರ,ಕಾಮಾಕ್ಷಿಪಾಳ್ಯ ಭಾಗದಲ್ಲೂ ರೋಡ್ ರಾಬರಿ ಮಾಡಿದ್ದರು. ಶಿವಾಜಿನಗರದ ಉದ್ಯಮಿಯೊಬ್ಬರನ್ನೂ ಸುಲಿಗೆ ಮಾಡಿದ್ದರು. ಪಲ್ಸರ್ ಬೈಕ್ ನಲ್ಲಿ ಬಂದು ಕೃತ್ಯವೆಸಗ್ತಿದ್ದ ಅಬ್ರಹಾರ್ ಟೀಂ ಅನ್ನು ಪೊಲೀಸರು ಬಂಧಿಸಿದ್ದು ರಾಜಗೋಪಾಲನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಕೆಎಸ್​ಆರ್​ಟಿಸಿ ಬ್ಯಾಟರಿ ಕದ್ದ ಖದೀಮರು  ಮೈಸೂರು: ನಗರದಲ್ಲಿ ರಾತ್ರಿ ತಂಗಿದ್ದ ಕೆಎಸ್‌ಆರ್​ಟಿಸಿ ಬಸ್ ನ ಬ್ಯಾಟರಿ ಕದ್ದು ಖದೀಮರು ಪಾರಾರಿಯಾಗಿದ್ದಾರೆ. ಚಾಮರಾಜನಗರ ಘಟಕದ ವಾಹನ ಸಂಖ್ಯೆ KA -57 F-1799 ವಾಹನದಲ್ಲಿ ಕಳವಾಗಿದೆ. ಬಸ್​ನ ಕಂಡಕ್ಟರ್ ಹಾಗೂ ಡ್ರೈವರ್ ರೂಟ್ ಡ್ಯೂಟಿ ಮುಗಿಸಿ ಮೈಸೂರಿನಲ್ಲಿ ಬಸ್ ನಿಲ್ಲಿಸಿ ಹೋಗಿದ್ದರು. ಈ ವೇಳೆ ಟೂ ವಿಲ್ಲರ್ ನಲ್ಲಿ ಬಂದು ಬಸ್ ಬ್ಯಾಟರಿ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾರದ್ದೋ ಮಾತು ಕೇಳಿ ಈಗ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ.

Mon Jan 16 , 2023
  ಬೆಂಗಳೂರು: ದೂರದೂರಿನಿಂದ ಆಗಮಿಸಿ ಬದುಕು ಕಟ್ಟಿಕೊಳ್ಳಬೇಕಾದವರು, ಯಾರದ್ದೋ ಮಾತು ಕೇಳಿ ಈಗ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ. ತಲಘಟ್ಟಪುರ ಬಳಿ ಒಂಟಿ ಮನೆಗೆ ನುಗ್ಗಿ ಕಳ್ಳತನ   ಮಾಡಲು ಮುಂದಾದ ಆರೋಪಿಗಳ ಬಂಧನವಾಗಿದೆ. ದೂರದ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಒಡಿಸ್ಸಾದಿಂದ ಕೆಲ ಯುವಕರು ಬೆಂಗಳೂರಿನ ಸಣ್ಣ ಪುಟ್ಟ ಹೋಟೆಲ್‌, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಕೆಲಸ ಮಾಡಿಕೊಂಡು ಇದ್ದವರಿಗೆ ಶೇಕ್ ಕಲೀಂ ಎಂಬಾತ ಮಾಸ್ಟರ್‌ ಮೈಂಡ್‌ ಪರಿಚಯವಾಗಿದ್ದ. ಉಂಡಾಡಿಗುಂಡ […]

Advertisement

Wordpress Social Share Plugin powered by Ultimatelysocial