ವೃದ್ಧನಿಗೆ ಡಿಕ್ಕಿ ಹೊಡೆದು 8 ಕಿ.ಮೀ.ವರೆಗೆ ಎಳೆದೊಯ್ದು ಕೊಂದ ಕಾರು ಚಾಲಕ.

ಪಾಟ್ನಾ: ವೇಗವಾಗಿ ಬಂದ ಕಾರೊಂದು 70 ವರ್ಷದ ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದು 8 ಕಿ.ಮೀ ದೂರ ಎಳೆದೊಯ್ದು ಆತನನ್ನು ಕೊಂದ ಘಟನೆ ಶುಕ್ರವಾರ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ನಂತ್ರ, ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ.

ಮೃತನನ್ನು ಶಂಕರ್ ಚೌಧರಿ (70) ಎಂದು ಗುರುತಿಸಲಾಗಿದೆ. ಶಂಕರ್ ಚೌಧರಿ ತಮ್ಮ ಬೈಸಿಕಲ್‌ನಲ್ಲಿ ಎನ್‌ಎಚ್ -28 ರ ಕೊಟವಾ ಬಳಿ ರಸ್ತೆ ದಾಟುತ್ತಿದ್ದಾಗ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ, ಚೌಧರಿ ಕಾರಿನ ಬಾನೆಟ್ ಹಿಡಿದು, ಕಾರನ್ನು ನಿಲ್ಲಿಸುವಂತೆ ಮನವಿ ಮಾಡಿದರೂ, ಚಾಲಕ ಕಾರನ್ನು ಮಾಡುತ್ತಲೇ ಇದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಚೌಧರಿಯನ್ನು ಸುಮಾರು 8 ಕಿ.ಮೀ ವರೆಗೆ ಎಳೆದುಕೊಂಡು ಹೋದ ನಂತ್ರ, ಚಾಲಕ ಬ್ರೇಕ್ ಹಾಕಿದ್ದಾನೆ. ಚಾಲಕ ಬ್ರೇಕ್ ಹಾಕಿದ ರಭಸಕ್ಕೆ ರಸ್ತೆಗೆ ಬಿದ್ದ ಚೌಧರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಜಿಲ್ಲಾ ಸಾರಿಗೆ ಕಚೇರಿಯಿಂದ ಅದರ ಮಾಲೀಕರ ಹೆಸರನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಪಿಪ್ರಕೋತಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅನುಜ್ ಕುಮಾರ್ ಸಿಂಗ್ ಹೇಳಿದ್ದಾರೆ. ಚಾಲಕನನ್ನು ಗುರುತಿಸಲು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ.

Sun Jan 22 , 2023
ಅಸ್ಸಾಂ: ಸಾಮಾನ್ಯವಾಗಿ ಒಂದೇ ಬಾರಿಗೆ ನಾಲ್ಕೈದು ಮಕ್ಕಳು ಹುಟ್ಟೋ ಸುದ್ದಿಯನ್ನ ಕೇಳ್ತಾ ಇದ್ವಿ. ಅದಕ್ಕೂ ಮೀರಿ ನಾಲ್ಕು ಕೈ, ನಾಲ್ಕು ಕಾಲು ಹೀಗೆ ವಿಚಿತ್ರ ಮಕ್ಕಳು ಹುಟ್ಟಿದನ್ನ ಕೇಳ್ತಾ ಇದ್ವಿ. ಆದರೆ ಇಲ್ಲೊಂದು ಕಡೆ ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದೆ. ನಿಜಕ್ಕೂ ಇದು ಆಶ್ಚರ್ಯದ ಜೊತೆಗೆ ವಿಚಿತ್ರವಾಗಿದೆ ಅಂತ ಅನ್ನಿಸಿದರೂ ಇದು ಸತ್ಯ. ಹೌದು, ದಿಬ್ರುಗಡ್ ಜಿಲ್ಲೆಯಲ್ಲಿ 11 ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಕಂಡುಬಂದಿದೆ. ಇದೊಂದು ವಿಚಿತ್ರ […]

Advertisement

Wordpress Social Share Plugin powered by Ultimatelysocial