ಕೇಸರಿ ಶಾಲು ಹೊದಿಸಿದ್ದಕ್ಕೆ ಕೆಂಡಾಮಂಡಲ: ಬೆಂಬಲಿಗ ಕೊಟ್ಟ ‘ಕುರಿ’ ಸ್ವೀಕರಿಸಿದ ಸಿದ್ದರಾಮಯ್ಯ

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಾದಾಮಿಯಲ್ಲಿ ವ್ಯಕ್ತಿಯೊಬ್ಬ ಕೇಸರಿ ಶಾಲು ಹೊದಿಸಲು ಮುಂದಾಗಿದ್ದು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಲು ಕಾರಣವಾಯಿತು.

ಕಾಟರಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಈ ವೇಳೆ ವ್ಯಕ್ತಿಯೊಬ್ಬ ಆಗಮಿಸಿ ಕೇಸರಿ ಶಾಲನ್ನು ಹೊದಿಸಲು ಪ್ರಯತ್ನಿಸಿದ್ದಾನೆ,
ಆಗ ಸಿಡಿಮಿಡಿಗೊಂಡ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

ಸಿದ್ದರಾಮಯ್ಯ ಅವರ ಈ ವರ್ತನೆ ಅಲ್ಲಿ ನೆರೆದಿದ್ದವರನ್ನು ದಿಗ್ಭ್ರಮೆಗೊಳಿಸಿದೆ, ಕೇಸರಿ ಶಾಲು ಹೊದಿಸಲು ಬಂದ ವ್ಯಕ್ತಿ ಜನರ ಗುಂಪಿನ ಮದ್ಯೆ ಪರಾರಿಯಾಗಿದ್ದಾನೆ, ಸಿದ್ದರಾಮಯ್ಯ ಅವರ ಮತ್ತೊಬ್ಬ
ಬೆಂಬಲಿಗ ಕುರಿಯನ್ನು ಉಡುಗೊರೆಯಾಗಿ ನೀಡಿದ, ಅದನ್ನು ಸ್ವೀಕರಿಸಿದ ಅವರು ಆತನಿಗೆ ಆಶೀರ್ವದಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ವಿಜಯ ದಿವಸ್‌ ಹಿನ್ನೆಲೆ ಸೇನಾ ಗೌರವ ಮೊತ್ತವನ್ನ ಹೆಚ್ಚಿಸಿದ ಸಿಎಂ ಬೋಮ್ಮಾಯಿ

Thu Dec 16 , 2021
ವಿಜಯ ದಿವಸ್‌ ಕಾರ್ಯಕ್ರಮದಹಿನ್ನೆಲೆ  ಬೆಳಗಾವಿಯ ಎಂಎಲ ಐ ಆರ್ ಸಿ ವಿಜಯ ದಿವಸ ಕಾರ್ಯಕ್ರಮ ದಲ್ಲಿ  ಮಾತನಾಡಿದ ಅವರು,ವಿಜಯ ದಿವಸ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶವನ್ನ ಸಿಎಂ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ. ನಾನು ಅತ್ಯಂತ ಹೆಮ್ಮೆ ಮತ್ತು ಸಂತೋಷದಿಂದ ಪಾಲ್ಗೊಂಡಿದ್ದೇನೆ.ಸೈನ್ಯ ಬರಿ ದೇಶದ ಸಂರಕ್ಷಣೆ ಮಾಡುತ್ತಿಲ್ಲ,ಆಂತರಿಕ ಭದ್ರತೆಯನ್ನ ಸಮರ್ಥ ವಾಗಿ ಮಾಡುತ್ತಿದೆ.ಇಂಡೋ ಪಾಕ್ ಯುದ್ಧದಲ್ಲಿ ನಮ್ಮ ಸೈನಿಕರು ತಮ್ಮ ಶೌರ್ಯ ಪ್ರದರ್ಶನ ಮಾಡಿದ್ದಾರೆ.3 ಸಾವಿರಕ್ಕೂ ಅಧಿಕ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ.9 ಸಾವಿರಕ್ಕೂ […]

Advertisement

Wordpress Social Share Plugin powered by Ultimatelysocial