ವಿಜಯ ದಿವಸ್ ಕಾರ್ಯಕ್ರಮದಹಿನ್ನೆಲೆ ಬೆಳಗಾವಿಯ ಎಂಎಲ ಐ ಆರ್ ಸಿ ವಿಜಯ ದಿವಸ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು,ವಿಜಯ ದಿವಸ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶವನ್ನ ಸಿಎಂ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ. ನಾನು ಅತ್ಯಂತ ಹೆಮ್ಮೆ ಮತ್ತು ಸಂತೋಷದಿಂದ ಪಾಲ್ಗೊಂಡಿದ್ದೇನೆ.ಸೈನ್ಯ ಬರಿ ದೇಶದ ಸಂರಕ್ಷಣೆ ಮಾಡುತ್ತಿಲ್ಲ,ಆಂತರಿಕ ಭದ್ರತೆಯನ್ನ ಸಮರ್ಥ ವಾಗಿ ಮಾಡುತ್ತಿದೆ.ಇಂಡೋ ಪಾಕ್ ಯುದ್ಧದಲ್ಲಿ ನಮ್ಮ ಸೈನಿಕರು ತಮ್ಮ ಶೌರ್ಯ ಪ್ರದರ್ಶನ ಮಾಡಿದ್ದಾರೆ.3 ಸಾವಿರಕ್ಕೂ ಅಧಿಕ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ.9 ಸಾವಿರಕ್ಕೂ ಅಧಿಕ ಸೈನಿಕರು ಗಾಯಗೊಂಡರು,1971 ರ ಯುದ್ಧದಲ್ಲಿ ಬೆಳಗಾವಿ ಮರಾಠ ರೆಜಿಮೆಂಟ್ ಪಾತ್ರ ಅವಿಸ್ಮರಣೀಯ.ಭಾರತದ ಆರ್ಮಿ ಪ್ರಪಂಚದ ಯಾವುದೇ ದೇಶಕ್ಕಿಂತಲೂ ಕಮ್ಮಿಯಿಲ್ಲ.ಆರ್ಥಿಕವಾಗಿ, ಮಾನವ ಸಂಪನ್ಮೂಲ ಜೊತೆಗೆ ಸೈನ್ಯಾಬಲ ಭಾರತದ ಶಕ್ತಿ ಶಾಲಿಯಿದೆ.1971 ರ ಯುದ್ಧ ದಿಂದ ಬಾಂಗ್ಲಾದೇಶ ರೂಪವಾಯಿತು.ಭಾರತೀಯ ಸೈನಿಕರಿನೆ ನನ್ನ ಸೆಲ್ಯೂಟ್.ವಿಶೇಷವಾಗಿ ಬಿಪಿನ್ ರಾವತ್ ಮತ್ತು 13 ಜನರಿಗೆ.ರಾಜ್ಯ ಸರ್ಕಾರ ಪರಮವೀರ ಚಕ್ರಕ್ಕೆ 25 ಲಕ್ಷ ಅನುದಾನ ಕೊಡ್ತಿದ್ದಿವಿ…ಈಗ ಪರವೀರ ಚಕ್ರ 1 ಕೋಟಿ 50 ಲಕ್ಷಕ್ಕೆ ಹೆಚ್ಚಳ. ಮಾಡಲಾಗಿದೆ ಮಹಾವೀರ 12 ಲಕ್ಷ ದಿಂದ 1 ಕೋಟಿ ಗೆ ಹೆಚ್ಚಳ,ಅಶೋಕ ಚಕ್ರ 25 ಲಕ್ಷ ದಿಂದ 1 ಕೋಟಿ 50 ಹೆಚ್ಚಳ.ಕೀರ್ತಿ ಚಕ್ರ 12 ಲಕ್ಷದಿಂದ 1 ಕೋಟಿ ಹೆಚ್ಚಳ,ವೀರ ಚಕ್ರ 8 ಲಕ್ಷದಿಂದ 50 ಲಕ್ಷ ಹೆಚ್ಚಳ,ಸೇನಾ, ನೌಕಾ ಸೇನಾ, ವಾಯು ಸೇನಾ ಮೆಡಲ್ ಮೊತ್ತ 2 ಲಕ್ಷದಿಂದ 15 ಲಕ್ಷ ಕ್ಕೆ ಹೆಚ್ಚಳಮೆನ್ ಶನ್ ಎನ್ ಡಿಎಸ್ ಪ್ಯಾಚ್ 2 ಲಕ್ಷದಿಂದ 15 ಲಕ್ಷ ಹೆಚ್ಚಳಶೌರ್ಯ ಚಕ್ರ 50 ಲಕ್ಷ ಹೀಗೆ ಸರ್ಕಾರದ ಗೌರವ ಹಣದ ಮೊತ್ತವನ್ನ ಹೆಚ್ಚಳ ಮಾಡಿದ್ದೇನೆಅನುದಾನ ಹೆಚ್ಚಳ ಮಾಡಿದ ಆದೇಶವನ್ನ ತೆಗೆದುಕೊಂಡು ಇಲ್ಲಿಗೆ ಬಂದಿದ್ದೇನೆ ಎಂದರು..
ವಿಜಯ ದಿವಸ್ ಹಿನ್ನೆಲೆ ಸೇನಾ ಗೌರವ ಮೊತ್ತವನ್ನ ಹೆಚ್ಚಿಸಿದ ಸಿಎಂ ಬೋಮ್ಮಾಯಿ
Please follow and like us: